ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುತ್ತಿರುವ ಪುಣ್ಯ ನದಿ ಕುಮಾರಧಾರ ನೆರೆ ನೀರಿನಿಂದ ತುಂಬಿ ಹರಿಯುತಿದ್ದು ಭಕ್ತರು ತೀರ್ಥ ಸ್ನಾನ ನೆರವೇರಿಸುವ ಸ್ನಾನ ಘಟ್ಟ ಸಂಪೂರ್ಣ ನೆರೆಯಿಂದ ಮಂಗಳವಾರ ಮುಳುಗಡೆಗೊಂಡಿದೆ.
ಘಟ್ಟದ ಮೇಲೆ ಹಾಗೂ ಸ್ಥಳಿಯವಾಗಿ ಭಾರಿ ಮಳೆ ಆದ ಕಾರಣ ಇದೇ ಮೊದಲ ಭಾರಿಗೆ ಈ ವರ್ಷ ಮುಳುಗಡೆಗೊಂಡಿತು.
ನಾಗರ ಪಂಚಮಿ ದಿನದಿಂದ ಮಳೆ ಈ ಭಾಗದಲ್ಲಿ ವ್ಯಾಪಕಗೊಂಡಿದ್ದು ಪಂಚಮಿ ಮರು ದಿನವೇ ಕುಮಾರಾಧಾರ ನದಿಯಲ್ಲಿ ನೆರೆ ಅಪಾರ ಪ್ರಮಾಣದಲ್ಲಿ ಕಾಣಿಸಿಕೊಂಡು ಹರಿದಿದೆ.
ನೆರೆಗೆ ಕೆಎಸ್ಎಸ್ ಕಾಲೇಜು ಹೊರತು ಪಡಿಸಿ ಇತೆರೆಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.