ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಂಗಳೂರು | ಈಜುಕೊಳ ಸುರಕ್ಷೆ: ಜೀವ ರಕ್ಷಕ ಸಿಬ್ಬಂದಿಗೆ ಬೇಕು ಈಜುಗಾರರ ಮೇಲೆ ನಿಗಾ

Published : 2 ಡಿಸೆಂಬರ್ 2024, 7:24 IST
Last Updated : 2 ಡಿಸೆಂಬರ್ 2024, 7:24 IST
ಫಾಲೋ ಮಾಡಿ
Comments
‘ವಿಡಿಯೊ ತಯಾರಿಸಿಕೊಡಲು ಸಿದ್ಧ’
ಜೀವ ರಕ್ಷಣಾ ಕಲೆಗಳಲ್ಲಿ ಈಜು ಒಂದು. ಈಜು ಕಲಿಯಲು ಆಗದವರು ನೀರಿಗೆ ಬಿದ್ದಾಗ ಸ್ವಯಂ ರಕ್ಷಣಾ ತಂತ್ರಗಳ ಬಗ್ಗೆಯಾದರೂ ಪ್ರಾಥಮಿಕ ಜ್ಞಾನ ಹೊಂದಿರಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಾರಂಭಿಸುವ ಪೂರ್ವದಲ್ಲಿ ವಿಡಿಯೊ ಪ್ರದರ್ಶಿಸಬಹುದು. ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ಈ ಕುರಿತು ಅರಿವು ಮೂಡಿಸುವ 2–3 ನಿಮಿಷಗಳ ಕಿರುಚಿತ್ರವನ್ನು ಉಚಿತವಾಗಿ ಮಾಡಿಕೊಡಲು ಸಿದ್ಧರಿದ್ದೇವೆ ಎನ್ನುತ್ತಾರೆ ಸೇಂಟ್ ಅಲೋಶಿಯಸ್ ಈಜುಕೊಳದ ತರಬೇತುದಾರ ಲೋಕರಾಜ್‌ ವಿ.ಎಸ್‌.
‘ಶಾಲೆ ಕಾಲೇಜುಗಳಲ್ಲಿ ಜಾಗೃತಿ’
ಸೋಮೇಶ್ವರ ಸಮೀಪ ಇತ್ತೀಚೆಗೆ ನಡೆದಿರುವ ಘಟನೆ ಮನಸ್ಸನ್ನು ಘಾಸಿಗೊಳಿಸಿದೆ. ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಜ್ಞಾನ ಇದ್ದಿದ್ದರೆ ಮೂರು ಜೀವಗಳು ಬದುಕಿ ಬಾಳುತ್ತಿದ್ದವು. ಈ ಘಟನೆ ನಂತರ ಜಾಗೃತಿ ಕಾರ್ಯಕ್ರಮ ನಡೆಸುವ ಯೋಚನೆ ಮೂಡಿದ್ದು ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ನೀರಿಗೆ ಬಿದ್ದಾಗ ಜೀವ ರಕ್ಷಣಾ ಕೌಶಲದ ಉಚಿತ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಸದ್ಯದಲ್ಲಿ ಜಿಲ್ಲಾಧಿಕಾರಿ ಭೇಟಿ ಮಾಡಿ ಈ ಕುರಿತು ಚರ್ಚಿಸಲಿದ್ದೇವೆ ಎಂದು ವಿ ಒನ್ ಅಕ್ವಾ ಸೆಂಟರ್ ನಿರ್ದೇಶಕ ನವೀನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT