ಸಮಿತಿಯ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ, ‘ಈ ಬಾರಿಯ ದಸರಾದಲ್ಲಿ ಹುಲಿವೇಷ ಕೇವಲ ಹರಕೆ ರೂಪದಲ್ಲಿ ಮಾತ್ರವೇ ನಡೆಯಲಿದೆ. ಯಾವುದೇ ರೀತಿಯಲ್ಲಿ ಆದಾಯ ಗಳಿಸುವ, ಮನರಂಜನೆಯ ಉದ್ದೇಶಕ್ಕಾಗಿ ಇರುವುದಿಲ್ಲ ಎಂಬುದನ್ನೂ ತಂಡಗಳು ತೀರ್ಮಾನಿಸಿವೆ. ನವರಾತ್ರಿಯ ಮೆರವಣಿಗೆಯಲ್ಲಿ ಹುಲಿವೇಷಧಾರಿಗಳು ನರ್ತನ ಮಾಡುವುದು ಇಲ್ಲಿನ ಸಂಪ್ರದಾಯ’ ಎಂದು ತಿಳಿಸಿದರು.