ಕೆಲ ವಿದ್ಯಾರ್ಥಿಗಳು ಭಾರತ ಮಾತೆ ಹಾಗೂ ವೀರ ಸಾವರ್ಕರ್ ಭಾವಚಿತ್ರವನ್ನು ತರಗತಿಯೊಂದರ ಗೋಡೆಯಲ್ಲಿ ಕರಿಹಲಗೆ ಬಳಿ ಸೋಮವಾರ ಸಂಜೆ ಅಳವಡಿಸಿದ್ದರು. ಭಾವಚಿತ್ರ ಅಳವಡಿಸುತ್ತಿರುವ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು. ಕೆಲವು ವಿದ್ಯಾರ್ಥಿಗಳು ಇದನ್ನು ಪ್ರಾಂಶುಪಾಲರಾದ ಅನಸೂಯ ರೈ ಅವರ ಗಮನಕ್ಕೆ ತಂದಿದ್ದರು ಎಂದು ಗೊತ್ತಾಗಿದೆ.