ಆದರೆ, 45 ನಿಮಿಷಗಳಾದರೂ ಗಾಯಾಳುವನ್ನು ಸ್ಕ್ಯಾನಿಂಗ್ಗೆ ಕರೆದೊಯ್ಯಲು ಆಂಬುಲೆನ್ಸ್ ದೊರಕಿರಲಿಲ್ಲ. ಧನುಷ್ ಜೊತೆಗಿದ್ದ ದೀಕ್ಷಿತ್ ಮತ್ತು ನಿತಿನ್ ಸಿಟ್ಟಿಗೆದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದಾಂದಲೆ ನಡೆಸಿದ್ದರು. ಘಟನಾವಳಿಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು.