ಇಂದಿನ ಕಾರ್ಯಕ್ರಮ: ಗುರುವಾರದ ಕಾರ್ಯಕ್ರಮದ ಸೇವಾಕರ್ತೃ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಪದ್ಮಪ್ರಸಾದ ಅಜಿಲ, ಪುಷ್ಪಲತಾ ಮತ್ತು ಮಕ್ಕಳು ಹಾಗೂ ಶಿವಪ್ರಸಾದ ಅಜಿಲ ಮತ್ತು ಕುಟುಂಬಸ್ಥರು ಆಗಿರುತ್ತಾರೆ. ಬೆಳಿಗ್ಗೆ 10 ಗಂಟೆಯಿಂದ ಇಂದ್ರ ಪ್ರತಿಷ್ಠೆ ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿಮಂಗಲ ವಿಧಾನ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿವೆ. ಅಪರಾಹ್ನ ಮೂರು ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.