ಕಾರ್ಮಿಕರು ಗ್ಯಾರೇಜ್ನೊಳಗಡೆ ಕೆಲಸ ಮಾಡುತ್ತಿದ್ದ ವೇಳೆ ಹೊಗೆ ಎದ್ದು, ಬಳಿಕ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹೊರಗೆ ಓಡಿಕೊಂಡು ಬಂದಿದ್ದಾರೆ. ಒಳಗಡೆ ಇದ್ದ ಗ್ಯಾಸ್ ಸಿಲಿಂಡರ್ ಅನ್ನು ತಕ್ಷಣವೇ ಹೊರಗಡೆ ಎಸೆದು ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಿದ್ದಾರೆ. ಗ್ಯಾರೇಜ್ನಲ್ಲಿ 10ಕ್ಕಿಂತಲೂ ಅಧಿಕ ವಾಹನಗಳಿದ್ದು, ಅವುಗಳನ್ನು ಸ್ಥಳೀಯರು ಕಾರ್ಯಾಚಣೆ ನಡೆಸಿ, ಬದಿಗೆ ಸರಿಸಿದ್ದಾರೆ.
ಪುತ್ತೂರು ಅಗ್ಮಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬರುವಷ್ಟರಲ್ಲಿ ಗ್ಯಾರೇಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾದ ಸ್ವಿಪ್ಟ್ ಕಾರು ಸಂಪೂರ್ಣವಾಗಿ ಭಸ್ಮಗೊಂಡಿದೆ. ಕೆಲವು ವಾಹನಗಳ ವಿವಿಧ ಭಾಗಗಳಾದ ಎಂಜಿನ್, ಬ್ಯಾಟರಿ ಸೇರಿದಂತೆ ಹಲವು ವಸ್ತುಗಳು, ಗ್ಯಾರೇಜ್ ಕಟ್ಟಡ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಸುತ್ತಮುತ್ತಲಿನಲ್ಲಿ ಮನೆಗಳು, ಅಂಗಡಿಗಳಿದ್ದು, ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೈದರ್ ಅಲಿ ಮೇಗಿನಪೇಟೆ, ಯೋಗೀಶ ಕಾಶಿಮಠ ಅವರ ತಂಡ ಪಿಕಪ್ ವಾಹನಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಅದರ ಮೂಲಕ ಬೆಂಕಿ ನಂದಿಸಲು ಯತ್ನಿಸಿದರು. ಅವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳವರು ಬಂದಿದ್ದು, ಕಾರ್ಯಾಚರಣೆ ನಡೆಸಿದರು.