‘ಹೆಚ್ಚು ತ್ಯಾಜ್ಯ ಉತ್ಪಾದಿಸುವವರು ಸ್ಥಳೀಯವಾಗಿ ವಿಲೇವಾರಿ ಮಾಡುವಂತೆ ಮಹಾನಗರ ಪಾಲಿಕೆ ಸೂಚಿಸಿದಾಗ, ಪರ್ಯಾಯ ಕ್ರಮದ ಬಗ್ಗೆ ಹಲವರು ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆಗೆ ಮುಂದಾದ ನಾವು, 15 ವಸತಿ ಸಮುಚ್ಚಯಗಳ 150 ಮನೆಗಳಿಗೆ ಉಚಿತವಾಗಿ ಮೂರು ಮಡಿಕೆಗಳ ಸಾಧನವನ್ನು ನೀಡಿ, ಅಲ್ಲಿ ಲಭ್ಯವಿರುವ ಸ್ಥಳದಲ್ಲಿಯೇ ಅವುಗಳನ್ನು ಇಟ್ಟು ಸಾವಯವ ಗೊಬ್ಬರ ಉತ್ಪಾದನೆ ಮಾಡುತ್ತಿದ್ದೇವೆ’ ಎಂದು ಕಾರ್ಯಕ್ರಮದ ರೂವಾರಿಯಾಗಿರುವ ರಾಮಕೃಷ್ಣ ಮಿಷನ್ನ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.