ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚತೊಡಗಿದಾಗ ‘ಜೀವ ರಕ್ಷಕ ಅಭಿಯಾನ‘ವನ್ನು ವೆಲ್ನೆಸ್ ಇನ್ನಷ್ಟು ಶಕ್ತಗೊಳಿಸಿತು. ಬೆಂಗಳೂರಿನ ‘ಮರ್ಸಿ ಮಿಷನ್’ ಕೂಡ ಇದಕ್ಕೆ ಕೈಜೋಡಿಸಿತು. ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಜತೆಯಲ್ಲೇ ಬಾಧಿತರಿಗೆ ಮಾರ್ಗದರ್ಶನ, ವಿಮೆ ಮತ್ತು ಅಗತ್ಯ ವೈದ್ಯಕೀಯ ನೆರವು, ಕ್ವಾರಂಟೈನ್ ನಿಗಾ, ಆಂಬುಲೆನ್ಸ್ ಮತ್ತು ಸ್ವಯಂ ಸೇವಕರ ನೆರವು ಒದಗಿಸಿತು. ಪುನರ್ವಸತಿ ಮತ್ತು ಮೃತರ ಅಂತ್ಯಸಂಸ್ಕಾರಕ್ಕೂ ಸಂಸ್ಥೆ ಕೈಜೋಡಿಸಿತು.