ಎಫ್ಎಸ್ಎಲ್ ವರದಿ ತಿರುಚಲು ಕಾಂಗ್ರೆಸ್ ಮುಂದಾಗಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ದೇಶದಲ್ಲಿ ಇಂತಹ 20 ಪ್ರಕರಣಗಳು ನಡೆದಿದ್ದು, ಎಲ್ಲದರಲ್ಲೂ ಆ ರೀತಿ ಘೋಷಣೆ ಕೂಗಿಲ್ಲ ಎಂದೇ ವರದಿ ಬಂದಿದೆ. ಈ ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ಕೋಮು ವೈಷಮ್ಯ ಬೆಳೆಯಲಿ ಎಂದು ಶ್ರೀರಾಮ ಸೇನೆಯವರು ಈ ಕೃತ್ಯ ನಡೆಸಿದ್ದು ತನಿಖೆಯಲ್ಲಿ ಬಹಿರಂಗವಾಯಿತು. ಮುಸಲ್ಮಾನರ ವಿರುದ್ಧ ಆರೋಪ ಬರುವ ತರಹ ಮಾಡಿ ಅವರೇ ಸಿಕ್ಕಿಬಿದ್ದರು’ ಎಂದರು.