ಅಬ್ದುಲ್ ವಹ್ವಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡುವರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸುವರು. ಎಚ್.ಎಂ ಅಡಿಟೋರಿಯಂ ಮುಂಭಾಗದಿಂದ ಸಂದೇಶ ರ್ಯಾಲಿ ಆರಂಭಗೊಂಡು ಉಪ್ಪಿನಂಗಡಿಯ ಮುಖ್ಯ ಬೀದಿಯಲ್ಲಿ ಸಾಗಲಿದೆ. ಬೆಳ್ತಂಗಡಿ, ಕಡಬ, ಸುಳ್ಯ, ಉಪ್ಪಿನಂಗಡಿ, ಪುತ್ತೂರು, ವಿಟ್ಲ ವ್ಯಾಪ್ತಿಯನ್ನೊಳಗೊಂಡ ಈಸ್ಟ್ ಎಸ್ವೈಎಸ್ ಸಂಘಟನೆಯಲ್ಲಿ ಸದ್ಯ 12 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದರು.