ಗುರುವಾರ ತಮ್ಮ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ವಾಲ್ಪಾಡಿಯ ಅರ್ಜುನಾಪುರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನಾನು 18 ನಿಮಿಷ ಭಾಷಣ ಮಾಡಿದ್ದೆ. ರಾಮಯಣದ ಘಟನೆಯನ್ನು ಉಲ್ಲೇಖಿಸುತ್ತಾ ರಾಮನಲ್ಲೂ ಅಧಿಕಾರವಿತ್ತು, ರಾವಣನಲ್ಲೂ ಇತ್ತು. ಇಬ್ಬರಲ್ಲೂ ಸಂಸ್ಕಾರವಿತ್ತು. ಆದರೆ ಇಬ್ಬರ ಆಳ್ವಿಕೆ ಮತ್ತು ನಡವಳಿಕೆಯಲ್ಲಿ ವ್ಯತ್ಯಾಸವಿತ್ತು. ರಾಮನ ಆದರ್ಶ ನಮಗೆ ಬೇಕು ಎಂದು ಹೇಳಿದ್ದೇನೆ ಹೊರತು ಎಲ್ಲಿಯು ಮುಖ್ಯಮಂತ್ರಿಯನ್ನಾಗಲಿ, ಶಾಸಕ ಅಭಯಚಂದ್ರ ಅವರನ್ನು 'ರಾಕ್ಷಸ' ಎಂದು ನಿಂದಿಸಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ನನ್ನ ಭಾಷಣದ ಆಡಿಯೊವನ್ನು ಪರಿಶೀಲಿಸಬಹುದು’ ಎಂದರು.