ಎಕ್ಸೋಟಿಕ್ ಹಾಗೂ ಪ್ರೀಮಿಯಂ ಕಾರುಗಳ ರ್ಯಾಂಪ್ ಷೋ. ಮಂಗಳೂರಿನ ಇಂಡಿಯನ್ ರ್ಯಾಲಿ ಚಾಂಪಿಯನ್ ಅರ್ಜುನ್ ರಾವ್ ಹಾಗೂ ಇಂಡಿಯನ್ ರ್ಯಾಲಿ ಚಾಂಪಿಯನ್ ರಾಹುಲ್ ಕಾಂತರಾತ್ ಅವರಿಂದ ರ್ಯಾಲಿ ಸಿಕ್ವೇನ್ಸ್, ಸ್ಟಂಟ್, ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪ್ನಿಂದ ದ್ವಿಚಕ್ರ ವಾಹನಗಳಿಂದ ಫ್ರೀ ಸ್ಟೈಲ್ ಸಾಹಸ ಪ್ರದರ್ಶನಗಳು ನಡೆದವು. ಟಿಎಎಸ್ಸಿ, ಐಎಂಎಸ್ಸಿ, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಅವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಅದಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಂ ಕಿಶೋರ್ ಆಳ್ವ ಉದ್ಘಾಟಿಸಿದರು. ಕೆಎಲ್14 ನೇತೃತ್ವ ವಹಿಸಿದ್ದ ಮೂಸ ಶರೀಫ್, ಇಂಡಿಯನ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾಯ್ಕ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆಯ ಉದ್ಯಮಿ.