<p><strong>ಮಂಗಳೂರು:</strong> `ಕಾನೂನು ನೋಡಬೇಡಿ. ಮಾನವೀಯತೆ ತೋರಿ. ನಮ್ಮಂಥ ಕಡುಬಡವರ ಪಾಲಿಗೆ ಕಾನೂನು ನೆರವಿಗೆ ಬಾರದಿದ್ದರೆ ಇನ್ನು ಯಾರ ಮೊರೆ ಹೋಗುವುದು~. - ಹೀಗೆಂದು ದಲಿತ ಸಮುದಾಯದ ವೆಂಕಮ್ಮ ಹಾಗೂ ಗಿರಿಜಾ ಕಣ್ಣೀರು ಸುರಿಸುತ್ತಾ ಪ್ರಶ್ನಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ನಂತೂರು ಪದವು ನೇಮು ಶೆಟ್ಟಿ ಕಂಪೌಂಡ್ನಲ್ಲಿ ವಾಸವಿದ್ದ ಇವರ ಮನೆಯನ್ನು ಬುಧವಾರ ತೆರವುಗೊಳಿಸಲಾಗಿತ್ತು.<br /> <br /> `ನಾವು ಅವಿವಾಹಿತರು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ಬೇರೆ ಎಲ್ಲಿಗೆ ಹೋಗುವುದು. ಮಾನವೀಯತೆ ತೋರಿ ಇಲ್ಲಿ ಉಳಿಯಲು ಅವಕಾಶ ನೀಡಿ. ಈಗ ಮನೆಗೆ ಬೀಗ ಹಾಕಲಾಗಿದೆ. ಈ ಮಳೆಯಲ್ಲಿ ಜಗಲಿಯಲ್ಲೇ ವಾಸಿಸುತ್ತಿದ್ದೇವೆ~ ಎಂದು ಅವರು ಅಳಲು ತೋಡಿಕೊಂಡರು. <br /> <br /> ಕೋರ್ಟ್ ಆದೇಶ ಆಗಿ ಮೂರು ದಿನವಷ್ಟೇ ಆಗಿದೆ. ಒಂದು ತಿಂಗಳವರೆಗೆ ಅವಕಾಶ ಇದೆ. ಆದರೆ ಜಾಗದ ಮಾಲೀಕರು ಪೊಲೀಸ್ ಹಾಗೂ ಗೂಂಡಾಗಳ ನೆರವಿನಿಂದ ಮನೆ ತೆರವು ಮಾಡಿ ದೌರ್ಜನ್ಯ ಎಸಗಿದ್ದಾರೆ~ ಎಂದು ಅವರು ದೂರಿದರು. <br /> <br /> `ನಾವು 80 ವರ್ಷದಿಂದ ಇಲ್ಲಿ ವಾಸ ಇದ್ದೇವೆ. ಪಡಿತರ ಚೀಟಿ, ಮತದಾರರ ಗುರುತು ಚೀಟಿ ಸಿಕ್ಕಿದೆ. 1997ರಲ್ಲಿ ಡಿಕ್ಲರೇಷನ್ಗೆ ಅರ್ಜಿ ಹಾಕಿದ್ದೇವೆ. ಅದರ ಸ್ವೀಕೃತಿ ಪ್ರತಿ ಇದೆ. ಜಾಗದ ಮಾಲೀಕರಿಗೆ ತೊಂದರೆ ಕೊಡುವುದಿಲ್ಲ. ಮೂರು ಸೆಂಟ್ಸ್ ಜಾಗ ನೀಡಿ~ ಎಂದು ಅವರು ವಿನಂತಿಸಿದರು. <br /> <br /> ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ನಿವೇಶನ, ಮನೆ ಸಿಕ್ಕಿದರೆ ಅಲ್ಲಿಗೆ ಹೋಗುತ್ತೇವೆ. ಅದು ಸಿಗುವವರೆಗಾದರೂ ಇಲ್ಲಿ ಉಳಿಯಲು ಅವಕಾಶ ನೀಡಿ~ ಎಂದು ಅವರು ಮನವಿ ಮಾಡಿದರು. <br /> <br /> ಇವರು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> `ಕಾನೂನು ನೋಡಬೇಡಿ. ಮಾನವೀಯತೆ ತೋರಿ. ನಮ್ಮಂಥ ಕಡುಬಡವರ ಪಾಲಿಗೆ ಕಾನೂನು ನೆರವಿಗೆ ಬಾರದಿದ್ದರೆ ಇನ್ನು ಯಾರ ಮೊರೆ ಹೋಗುವುದು~. - ಹೀಗೆಂದು ದಲಿತ ಸಮುದಾಯದ ವೆಂಕಮ್ಮ ಹಾಗೂ ಗಿರಿಜಾ ಕಣ್ಣೀರು ಸುರಿಸುತ್ತಾ ಪ್ರಶ್ನಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ನಂತೂರು ಪದವು ನೇಮು ಶೆಟ್ಟಿ ಕಂಪೌಂಡ್ನಲ್ಲಿ ವಾಸವಿದ್ದ ಇವರ ಮನೆಯನ್ನು ಬುಧವಾರ ತೆರವುಗೊಳಿಸಲಾಗಿತ್ತು.<br /> <br /> `ನಾವು ಅವಿವಾಹಿತರು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇವೆ. ಬೇರೆ ಎಲ್ಲಿಗೆ ಹೋಗುವುದು. ಮಾನವೀಯತೆ ತೋರಿ ಇಲ್ಲಿ ಉಳಿಯಲು ಅವಕಾಶ ನೀಡಿ. ಈಗ ಮನೆಗೆ ಬೀಗ ಹಾಕಲಾಗಿದೆ. ಈ ಮಳೆಯಲ್ಲಿ ಜಗಲಿಯಲ್ಲೇ ವಾಸಿಸುತ್ತಿದ್ದೇವೆ~ ಎಂದು ಅವರು ಅಳಲು ತೋಡಿಕೊಂಡರು. <br /> <br /> ಕೋರ್ಟ್ ಆದೇಶ ಆಗಿ ಮೂರು ದಿನವಷ್ಟೇ ಆಗಿದೆ. ಒಂದು ತಿಂಗಳವರೆಗೆ ಅವಕಾಶ ಇದೆ. ಆದರೆ ಜಾಗದ ಮಾಲೀಕರು ಪೊಲೀಸ್ ಹಾಗೂ ಗೂಂಡಾಗಳ ನೆರವಿನಿಂದ ಮನೆ ತೆರವು ಮಾಡಿ ದೌರ್ಜನ್ಯ ಎಸಗಿದ್ದಾರೆ~ ಎಂದು ಅವರು ದೂರಿದರು. <br /> <br /> `ನಾವು 80 ವರ್ಷದಿಂದ ಇಲ್ಲಿ ವಾಸ ಇದ್ದೇವೆ. ಪಡಿತರ ಚೀಟಿ, ಮತದಾರರ ಗುರುತು ಚೀಟಿ ಸಿಕ್ಕಿದೆ. 1997ರಲ್ಲಿ ಡಿಕ್ಲರೇಷನ್ಗೆ ಅರ್ಜಿ ಹಾಕಿದ್ದೇವೆ. ಅದರ ಸ್ವೀಕೃತಿ ಪ್ರತಿ ಇದೆ. ಜಾಗದ ಮಾಲೀಕರಿಗೆ ತೊಂದರೆ ಕೊಡುವುದಿಲ್ಲ. ಮೂರು ಸೆಂಟ್ಸ್ ಜಾಗ ನೀಡಿ~ ಎಂದು ಅವರು ವಿನಂತಿಸಿದರು. <br /> <br /> ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ನಿವೇಶನ, ಮನೆ ಸಿಕ್ಕಿದರೆ ಅಲ್ಲಿಗೆ ಹೋಗುತ್ತೇವೆ. ಅದು ಸಿಗುವವರೆಗಾದರೂ ಇಲ್ಲಿ ಉಳಿಯಲು ಅವಕಾಶ ನೀಡಿ~ ಎಂದು ಅವರು ಮನವಿ ಮಾಡಿದರು. <br /> <br /> ಇವರು ಬಾಲಕೃಷ್ಣ ಶೆಟ್ಟಿ ಹಾಗೂ ಲೀಲಾವತಿ ಶೆಟ್ಟಿ ಎಂಬವರ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>