ಸುರತ್ಕಲ್: ಕಾನೂನು ಉಲ್ಲಂಘಿಸಿ ಗೋ ಸಾಗಾಣೆ ಮತ್ತು ಗೋ ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಅಕ್ರಮ ಕಸಾಯಿಖಾನೆಯನ್ನು ಕೂಡಲೇ ಮುಚ್ಚಬೇಕು ಎಂದು ಸುರತ್ಕಲ್ ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು.
ಸುರತ್ಕಲ್ ಪೊಲೀಸರು ಹಾಗೂ ನಾಗರಿಕರ ವತಿಯಿಂದ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಭಾನುವಾರ ನಡೆದ ಅಕ್ರಮ ದನ ಸಾಗಾಣೆ ತಡೆ ಕುರಿತ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗೋವುಗಳನ್ನು ಅಮಾನುಷವಾಗಿ ಮತ್ತು ಅಕ್ರಮವಾಗಿ ಸಾಗಿಸುತ್ತಿರುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಯ ಮೇಲೆ ಹೊಡೆತ ಬೀಳುತ್ತಿದೆ. ಹಿಂದೂ ಧರ್ಮದಲ್ಲಿ ಗೋವಿನ ಬಗ್ಗೆ ಪವಿತ್ರವಾದ ಸ್ಥಾನವಿದೆ ಎಂದು ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ನ್ಯಾಯಯುತವಾದ ಗೋ ಸಾಗಣೆಗೆ ಅವಕಾಶವನ್ನು ಪೊಲೀಸರೂ ನೀಡಬೇಕು ಹಿಂದೂಗಳೂ ನಿಡಬೇಕು ಎನ್ನುವುದು ಮುಸ್ಲಿಮರ ಬೇಡಿಕೆಯಾದರೆ, ಗೋ ಹತ್ಯೆ ಮತ್ತು ಗೋ ಸಾಗಣೆಗೆ ಸಂಬಂಧಿಸಿ ಪ್ರತ್ಯೇಕ ಸಭೆ ಕರೆಸಿ ಸಮಾಲೋಚನೆ ನಡೆಸಿ ಸೂಕ್ತ ವೇದಿಕೆ ನಿರ್ಮಿಸಬೇಕು ಎನ್ನುವುದು ಹಿಂದೂಗಳ ವಾದ. ದನ ಸಾಗಣೆ ತಪ್ಪು ಎಂಬ ವಾದ ನಮ್ಮದಲ್ಲ. ಆದರೆ ದನವನ್ನು ಕದ್ದು ಸಾಗಿಸುವುದು, ಜೀವನೋಪಾಯವಾಗಿರುವ ದನಗಳನ್ನು ಕದಿಯುವುದು ಮತ್ತು ಕಡಿಯುವುದು,