ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಂಬಳ ಆರಂಭವಾಗಬೇಕಿತ್ತು. ಸಂಘಟಕರು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ, ಕಂಬಳ ತಡೆಯುವಂತೆ ಪೇಟಾ ಕಾರ್ಯಕರ್ತರು ಕಾಸರಗೋಡು ಎಸ್ಪಿ ಎ.ಶ್ರೀನಿವಾಸ್ ಅವರಿಗೆ ದೂರು ನೀಡಿದ್ದರು. ಸಂಘಟಕರಿಗೆ ನೋಟಿಸ್ ಜಾರಿ ಮಾಡಿರುವ ಎಸ್ಪಿ, ಕಂಬಳ ನಡೆಸದಂತೆ ಸೂಚನೆ ನೀಡಿದ್ದಾರೆ.