ಕೆಎಂಸಿ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಲ್.ಕಾಮತ್ ಮಾತ ನಾಡಿ, ‘ರೋಗಿಗಳಿಗೆ ಯಾವ ಔಷಧ ಸೂಕ್ತ ಎನ್ನುವುದು ವೈದ್ಯರ ವಿವೇಚನೆಗೆ ಬಿಟ್ಟದ್ದು. ಏಕೆಂದರೆ ರೋಗಿಯ ದೇಹಪ್ರಕೃತಿ, ರೋಗಲಕ್ಷಣ ಎಲ್ಲವನ್ನೂ ವೈದ್ಯ ತಪಾಸಣೆ ಮಾಡಿರುತ್ತಾನೆ. ಇದರ ಬದಲಾಗಿ ಜನರಿಕ್ ಹೆಸರುಗಳನ್ನು ಶಿಫಾರಸು ಮಾಡಿದರೆ ಆ ಎಲ್ಲ ವಿವೇಚನಾ ಅಧಿಕಾರವನ್ನು ಕೆಮಿಸ್ಟ್ ಗಳಿಗೆ ನೀಡಿದಂತಾಗುತ್ತದೆ. ಇದರಿಂದ ರೋಗಿಗಳಿಗೂ ಅಪಾಯ’ ಎಂದು ಎಚ್ಚರಿಸಿದರು.