ಉಳ್ಳಾಲ: ಇಲ್ಲಿನ ಮೊಗವೀರಪಟ್ನದಲ್ಲಿ ಸಮುದ್ರದ ಅಲೆಗಳ ಅಬ್ಬರ ಮಂಗಳವಾರ ಹೆಚ್ಚಾಗಿದ್ದು, ಇದರಿಂದ ಒಂದು ಮನೆ ಅಪಾಯದ ಅಂಚಿನಲ್ಲಿದೆ. 15 ವರ್ಷಗಳಿಂದ ಇದ್ದಂತಹ ಶಾರದಾ ಕಟ್ಟೆ ಸಮುದ್ರ ಪಾಲಾಗಿದೆ.
ಕೈಕೋ, ಸುಭಾಷನಗರ, ಕಿಲೇರಿಯಾನಗರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಹಾನಿಯಾಗುತ್ತಿತ್ತು. ಇದೀಗ ಮೊಗವೀರಪಟ್ನದಲ್ಲೂ ಸಮುದ್ರ ಕೊರೆತ ಹೆಚ್ಚಾಗಿ ಯಾದವ ಕರ್ಕೇರ ಎಂಬವರ ಮನೆಗೆ ಭಾಗಶ: ಹಾನಿಯಾಗಿದೆ.