ಸದ್ಯದಲ್ಲೇ ಸಭೆ: ಪ್ರವಾಸಿ ಮಂದಿರದ ಆವರಣದಲ್ಲಿ ಕಸ ಎಸೆಯದಿರಲು ಪಂಚಾಯಿತಿ ನಿರ್ಧರಿಸಿದ್ದು, ಪರಿಸರದ ವ್ಯಾಪಾರಸ್ಥರ ಸಭೆಯೊಂದನ್ನು ಕರೆದು ತ್ಯಾಜ್ಯ ಸಂಗ್ರಹ ಬಗ್ಗ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ತಿಪ್ಪೆಗುಂಡಿ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ತಿಪ್ಪೆಗುಂಡಿ ನಿರ್ಮಾಣ ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಹೇಳಿದ್ದಾರೆ.