ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಬಂಜಾರರ ಅಭಿವೃದ್ಧಿಗೆ 100 ಎಕೆರೆ ಭೂಮಿಯನ್ನು ಕಾಯ್ದಿರಿಸುತ್ತೇವೆ ಎಂದು ಹೇಳಿದ್ದು, ಅದನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗುವುದು. ಸೂರಗೊಂಡನಕೊಪ್ಪದಲ್ಲಿ ಗುಹೆಯೊಳಗೆ ಸೇವಾಲಾಲ್ ಜೀವನ ಚರಿತ್ರೆ ಸಿಗುವಂತೆ ಮಾಡಬೇಕು ಹಾಗೂ ಔಷಧವನ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಲಾಗುವುದು’ ಎಂದರು.