‘ರಾಜ್ಯದಲ್ಲಿ 14,400 ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಸುಮಾರು 6,000 ಮಂದಿ 15ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದವರು ಇದ್ದಾರೆ. ವರ್ಷಕ್ಕೆ ಎಂಟು ತಿಂಗಳಷ್ಟೇ ಕೆಲಸ ಇರುತ್ತಿತ್ತು. ಈಗ ಕೊರೊನಾದಿಂದ ಅದೂ ಇಲ್ಲ. ಉನ್ನತ ಶಿಕ್ಷಣ ಪಡೆಯದೇ ಇದ್ದಿದ್ದರೆ ಬೇರೆ ಏನೋ ಕೆಲಸ ಮಾಡಿ ಬದುಕುತ್ತಿದ್ದೆವು. ಭವಿಷ್ಯದ ಕನಸು ಕಟ್ಟಿಕೊಂಡು ಉಪನ್ಯಾಸಕರಾಗಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಸಂಘದ ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಯರಗಟ್ಟಿಹಳ್ಳಿ ‘ಪ್ರಜಾವಾಣಿ’ಗೆ ವಿವರಿಸಿದರು.