‘ಪುರಾಣ ಕಾಲದಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಅದು ಹೊರಗೆ ಬರುತ್ತಿರಲಿಲ್ಲ. ಮಹಿಳೆ ಹೊಂದಿಕೊಂಡು ಹೋಗುತ್ತಿದ್ದರು. ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನು ಹೇಳಿದ್ದ. ಮಹಿಳೆಯರನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಊಟ ಮೊದಲು ಗಂಡು ಮಕ್ಕಳಿಗೆ ನೀಡಿ ಉಳಿದರಷ್ಟೇ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿತ್ತು. ಈಗ ಮಹಿಳೆಯರು ವಿದ್ಯೆ ಕಲಿತು, ಎಲ್ಲ ಕಷ್ಟಗಳನ್ನು ದಾಟಿ ಮುಂದೆ ಬಂದಿದ್ದೇವೆ’ ಎಂದರು.