<p><strong>ದಾವಣಗೆರೆ: </strong>ಜಿಲ್ಲೆಯಲ್ಲಿ 257 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಆದರೆ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ವರದಿಗಳನ್ನು ನೀಡುವುದಿಲ್ಲ ಎಂದು ನಿರ್ಧರಿಸಿರುವುದರಿಂದ ಕೊರೊನಾಕ್ಕೆ ಸಂಬಂಧಿಸಿದ ಜಿಲ್ಲಾ ಬುಲೆಟಿನ್ ನೀಡಿಲ್ಲ.</p>.<p>ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14 ಸಾವಿರ (14,097) ದಾಟಿದೆ. 10733 ಮಂದಿ ಗುಣಮುಖರಾಗಿದ್ದಾರೆ. 228 ಮಂದಿ ಮೃತಪಟ್ಟಿದ್ದಾರೆ. 3,136 ಸಕ್ರಿಯ ಪ್ರಕರಣಗಳಿವೆ.</p>.<p class="Briefhead"><strong>ಜಗಳೂರು: ಇಬ್ಬರ ಸಾವು</strong></p>.<p>ಕೊರೊನಾ ಸೋಂಕಿನಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಶಿಕ್ಷಕ ರವಿ ಹಾಗೂ ಹೆಡ್ ಕಾನ್ಸ್ಟೆಬಲ್ ಗೋಣಿಬಸಪ್ಪ ಮೃತಪಟ್ಟವರು.</p>.<p class="Briefhead"><strong>ಮಲೆಬೆನ್ನೂರು 11 ಜನರಿಗೆ ಕೊರೊನಾ</strong></p>.<p>ಮಲೇಬೆನ್ನೂರು ಪಟ್ಟಣದ ಸೇರಿ ಹೋಬಳಿ ವ್ಯಾಪ್ತಿಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಗುರುವಾರ ತಗುಲಿದೆ.</p>.<p>ಪಟ್ಟಣದ ವೃದ್ಧ, ನಂದಿಗಾವಿಯ ಇಬ್ಬರು ಪುರುಷರು, ಹರಳಹಳ್ಳಿ ಇಬ್ಬರು ಪುರುಷರು, ಮಹಿಳೆ, ಗುಳದಹಳ್ಳಿಯ ಮಹಿಳೆ, ನಿಟ್ಟೂರಿನ ಮೂವರು ಮಹಿಳೆಯರು, ಭಾನುವಳ್ಳಿ ಪುರುಷನಿಗೆ ಕೊರೊನಾ ಬಂದಿದೆ.</p>.<p class="Briefhead"><strong>ಸಾಸ್ವೆಹಳ್ಳಿ: ಯುವಕ ಸಾವು</strong></p>.<p>ಸಾಸ್ವೆಹಳ್ಳಿ ಸಮೀಪದ ಹೊಟ್ಯಾಪುರದ 36 ವರ್ಷದ ಪುರುಷ ಕೊರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ನಿಯಮ ಪ್ರಕಾರ ಹೊಟ್ಯಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಾಸ್ವೆಹಳ್ಳಿಯ ಪುರುಷ, ಹೊಟ್ಯಾಪುರದ ವೃದ್ಧರೊಬ್ಬರಿಗೆ ಕೊರೊನಾ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಜಿಲ್ಲೆಯಲ್ಲಿ 257 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಆದರೆ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ವರದಿಗಳನ್ನು ನೀಡುವುದಿಲ್ಲ ಎಂದು ನಿರ್ಧರಿಸಿರುವುದರಿಂದ ಕೊರೊನಾಕ್ಕೆ ಸಂಬಂಧಿಸಿದ ಜಿಲ್ಲಾ ಬುಲೆಟಿನ್ ನೀಡಿಲ್ಲ.</p>.<p>ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14 ಸಾವಿರ (14,097) ದಾಟಿದೆ. 10733 ಮಂದಿ ಗುಣಮುಖರಾಗಿದ್ದಾರೆ. 228 ಮಂದಿ ಮೃತಪಟ್ಟಿದ್ದಾರೆ. 3,136 ಸಕ್ರಿಯ ಪ್ರಕರಣಗಳಿವೆ.</p>.<p class="Briefhead"><strong>ಜಗಳೂರು: ಇಬ್ಬರ ಸಾವು</strong></p>.<p>ಕೊರೊನಾ ಸೋಂಕಿನಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಶಿಕ್ಷಕ ರವಿ ಹಾಗೂ ಹೆಡ್ ಕಾನ್ಸ್ಟೆಬಲ್ ಗೋಣಿಬಸಪ್ಪ ಮೃತಪಟ್ಟವರು.</p>.<p class="Briefhead"><strong>ಮಲೆಬೆನ್ನೂರು 11 ಜನರಿಗೆ ಕೊರೊನಾ</strong></p>.<p>ಮಲೇಬೆನ್ನೂರು ಪಟ್ಟಣದ ಸೇರಿ ಹೋಬಳಿ ವ್ಯಾಪ್ತಿಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಗುರುವಾರ ತಗುಲಿದೆ.</p>.<p>ಪಟ್ಟಣದ ವೃದ್ಧ, ನಂದಿಗಾವಿಯ ಇಬ್ಬರು ಪುರುಷರು, ಹರಳಹಳ್ಳಿ ಇಬ್ಬರು ಪುರುಷರು, ಮಹಿಳೆ, ಗುಳದಹಳ್ಳಿಯ ಮಹಿಳೆ, ನಿಟ್ಟೂರಿನ ಮೂವರು ಮಹಿಳೆಯರು, ಭಾನುವಳ್ಳಿ ಪುರುಷನಿಗೆ ಕೊರೊನಾ ಬಂದಿದೆ.</p>.<p class="Briefhead"><strong>ಸಾಸ್ವೆಹಳ್ಳಿ: ಯುವಕ ಸಾವು</strong></p>.<p>ಸಾಸ್ವೆಹಳ್ಳಿ ಸಮೀಪದ ಹೊಟ್ಯಾಪುರದ 36 ವರ್ಷದ ಪುರುಷ ಕೊರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ನಿಯಮ ಪ್ರಕಾರ ಹೊಟ್ಯಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಾಸ್ವೆಹಳ್ಳಿಯ ಪುರುಷ, ಹೊಟ್ಯಾಪುರದ ವೃದ್ಧರೊಬ್ಬರಿಗೆ ಕೊರೊನಾ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>