ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

257 ಮಂದಿಗೆ ಕೊರೊನಾ: ಬಾರದ ಜಿಲ್ಲಾ ಬುಲೆಟಿನ್‌

ಜಗಳೂರಿನ ಶಿಕ್ಷಕ, ಪೊಲೀಸ್‌ ಕಾನ್‌ಸ್ಟೆಬಲ್‌, ಸಾಸ್ವೆಹಳ್ಳಿಯ ಯುವಕ ಸಾವು
Last Updated 18 ಸೆಪ್ಟೆಂಬರ್ 2020, 5:54 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 257 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಆದರೆ ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ವರದಿಗಳನ್ನು ನೀಡುವುದಿಲ್ಲ ಎಂದು ನಿರ್ಧರಿಸಿರುವುದರಿಂದ ಕೊರೊನಾಕ್ಕೆ ಸಂಬಂಧಿಸಿದ ಜಿಲ್ಲಾ ಬುಲೆಟಿನ್‌ ನೀಡಿಲ್ಲ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14 ಸಾವಿರ (14,097) ದಾಟಿದೆ. 10733 ಮಂದಿ ಗುಣಮುಖರಾಗಿದ್ದಾರೆ. 228 ಮಂದಿ ಮೃತಪಟ್ಟಿದ್ದಾರೆ. 3,136 ಸಕ್ರಿಯ ಪ್ರಕರಣಗಳಿವೆ.

ಜಗಳೂರು: ಇಬ್ಬರ ಸಾವು

ಕೊರೊನಾ ಸೋಂಕಿನಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಶಿಕ್ಷಕ ರವಿ ಹಾಗೂ ಹೆಡ್ ಕಾನ್‌ಸ್ಟೆಬಲ್ ಗೋಣಿಬಸಪ್ಪ ಮೃತಪಟ್ಟವರು.

ಮಲೆಬೆನ್ನೂರು 11 ಜನರಿಗೆ ಕೊರೊನಾ

ಮಲೇಬೆನ್ನೂರು ಪಟ್ಟಣದ ಸೇರಿ ಹೋಬಳಿ ವ್ಯಾಪ್ತಿಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಗುರುವಾರ ತಗುಲಿದೆ.

ಪಟ್ಟಣದ ವೃದ್ಧ, ನಂದಿಗಾವಿಯ ಇಬ್ಬರು ಪುರುಷರು, ಹರಳಹಳ್ಳಿ ಇಬ್ಬರು ಪುರುಷರು, ಮಹಿಳೆ, ಗುಳದಹಳ್ಳಿಯ ಮಹಿಳೆ, ನಿಟ್ಟೂರಿನ ಮೂವರು ಮಹಿಳೆಯರು, ಭಾನುವಳ್ಳಿ ಪುರುಷನಿಗೆ ಕೊರೊನಾ ಬಂದಿದೆ.

ಸಾಸ್ವೆಹಳ್ಳಿ: ಯುವಕ ಸಾವು

ಸಾಸ್ವೆಹಳ್ಳಿ ಸಮೀಪದ ಹೊಟ್ಯಾಪುರದ 36 ವರ್ಷದ ಪುರುಷ ಕೊರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. ಕೋವಿಡ್ ನಿಯಮ ಪ್ರಕಾರ ಹೊಟ್ಯಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಾಸ್ವೆಹಳ್ಳಿಯ ಪುರುಷ, ಹೊಟ್ಯಾಪುರದ ವೃದ್ಧರೊಬ್ಬರಿಗೆ ಕೊರೊನಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT