<p><strong>ದಾವಣಗೆರೆ: </strong>ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್ನಲ್ಲಿ ವ್ಯಾಜ್ಯಪೂರ್ವ 224 ಪ್ರಕರಣಗಳು ಮತ್ತು ವಿಚಾರಣೆಗೆ ಬಾಕಿ ಇದ್ದ 3,764 ಒಟ್ಟು 3,988 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 10.16 ಕೋಟಿ ಪರಿಹಾರ ಕೊಡಿಸಲಾಯಿತು.</p>.<p>ರಾಜೀಯಾಗಬಲ್ಲ ಕ್ರಿಮಿನಲ್ ಅಪರಾಧಗಳು 20 ಇತ್ಯರ್ಥಗೊಂಡಿವೆ. ₹ 32,500 ಪರಿಹಾರ ಒದಗಿಸಲಾಗಿದೆ. 63 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದೆ. ₹ 1.15 ಕೋಟಿ ಪರಿಹಾರದ ತೀರ್ಪು ನೀಡಲಾಗಿದೆ.</p>.<p>ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 22.14 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ ಪ್ರಕರಣಗಳಲ್ಲಿ 8 ಇತ್ಯರ್ಥಪಡಿಸಿ ₹ 16.87 ಲಕ್ಷ ಪರಿಹಾರ ಕೊಡಿಸಲಾಯಿತು.</p>.<p>ಹಣ ವಸೂಲಾತಿ ಪ್ರಕರಣಗಳಲ್ಲಿ ಬಾಕಿ ಇದ್ದವುಗಳಲ್ಲಿ 7 ಪ್ರಕರಣ ಇತ್ಯರ್ಥಗೊಂಡು ₹ 14.31 ಲಕ್ಷ ಕೊಡಿಸಲಾಯಿತು.</p>.<p>ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 96 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 3.98 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ 3 ಸಮಸ್ಯೆ ಸರಿಪಡಿಸಲಾಯಿತು. ₹ 11.5 ಲಕ್ಷ ಕೊಡಿಸಲಾಯಿತು.</p>.<p>ವಿದ್ಯುತ್ಗೆ ಸಂಬಂಧಿಸಿದಂತೆ 156 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 4.47 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಯಿತು. ಬಾಡಿಗೆ ವಿವಾದ ಸಹಿತ ಇತರ ನಾಗರಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 175 ಇತ್ಯರ್ಥಪಡಿಸಿ ₹ 3.94 ಕೋಟಿ ಪರಿಹಾರ ನೀಡಲು ಆದೇಶಿಸಲಾಯಿತು.</p>.<p>ಇತರ ಪಿಟ್ಟಿ ಕೇಸ್ ಸಹಿತ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2952 ರಾಜಿಯಲ್ಲಿ ಮುಗಿದವು. ₹ 36.19 ಪರಿಹಾರ ಒದಗಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೀತಾ ಕೆ.ಬಿ. ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಇ–ಲೋಕ ಅದಲಾತ್ ನಡೆಯಿತು ಎಂದು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ನಡೆದ ಮೆಗಾ ಇ-ಲೋಕ್ ಅದಾಲತ್ನಲ್ಲಿ ವ್ಯಾಜ್ಯಪೂರ್ವ 224 ಪ್ರಕರಣಗಳು ಮತ್ತು ವಿಚಾರಣೆಗೆ ಬಾಕಿ ಇದ್ದ 3,764 ಒಟ್ಟು 3,988 ಪ್ರಕರಣಗಳು ಇತ್ಯರ್ಥಗೊಂಡಿವೆ. ₹ 10.16 ಕೋಟಿ ಪರಿಹಾರ ಕೊಡಿಸಲಾಯಿತು.</p>.<p>ರಾಜೀಯಾಗಬಲ್ಲ ಕ್ರಿಮಿನಲ್ ಅಪರಾಧಗಳು 20 ಇತ್ಯರ್ಥಗೊಂಡಿವೆ. ₹ 32,500 ಪರಿಹಾರ ಒದಗಿಸಲಾಗಿದೆ. 63 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿದೆ. ₹ 1.15 ಕೋಟಿ ಪರಿಹಾರದ ತೀರ್ಪು ನೀಡಲಾಗಿದೆ.</p>.<p>ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ₹ 22.14 ಲಕ್ಷ ಪರಿಹಾರ ಒದಗಿಸಲಾಯಿತು. ಬಾಕಿ ಪ್ರಕರಣಗಳಲ್ಲಿ 8 ಇತ್ಯರ್ಥಪಡಿಸಿ ₹ 16.87 ಲಕ್ಷ ಪರಿಹಾರ ಕೊಡಿಸಲಾಯಿತು.</p>.<p>ಹಣ ವಸೂಲಾತಿ ಪ್ರಕರಣಗಳಲ್ಲಿ ಬಾಕಿ ಇದ್ದವುಗಳಲ್ಲಿ 7 ಪ್ರಕರಣ ಇತ್ಯರ್ಥಗೊಂಡು ₹ 14.31 ಲಕ್ಷ ಕೊಡಿಸಲಾಯಿತು.</p>.<p>ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ 96 ಪ್ರಕರಣಗಳು ರಾಜೀಯಲ್ಲಿ ಮುಗಿಸಲಾಯಿತು. ಸಂತ್ರಸ್ತರಿಗೆ ₹ 3.98 ಕೋಟಿ ಪರಿಹಾರ ಒದಗಿಸಲಾಯಿತು. ಕಾರ್ಮಿಕರಿಗೆ ಸಂಬಂಧಿಸಿದ 3 ಸಮಸ್ಯೆ ಸರಿಪಡಿಸಲಾಯಿತು. ₹ 11.5 ಲಕ್ಷ ಕೊಡಿಸಲಾಯಿತು.</p>.<p>ವಿದ್ಯುತ್ಗೆ ಸಂಬಂಧಿಸಿದಂತೆ 156 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 4.47 ಲಕ್ಷ ಪರಿಹಾರ ನೀಡಲು ಆದೇಶ ನೀಡಲಾಯಿತು. ಬಾಡಿಗೆ ವಿವಾದ ಸಹಿತ ಇತರ ನಾಗರಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ 175 ಇತ್ಯರ್ಥಪಡಿಸಿ ₹ 3.94 ಕೋಟಿ ಪರಿಹಾರ ನೀಡಲು ಆದೇಶಿಸಲಾಯಿತು.</p>.<p>ಇತರ ಪಿಟ್ಟಿ ಕೇಸ್ ಸಹಿತ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2952 ರಾಜಿಯಲ್ಲಿ ಮುಗಿದವು. ₹ 36.19 ಪರಿಹಾರ ಒದಗಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗೀತಾ ಕೆ.ಬಿ. ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 24 ನ್ಯಾಯಾಲಯಗಳಲ್ಲಿ ಇ–ಲೋಕ ಅದಲಾತ್ ನಡೆಯಿತು ಎಂದು ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>