ಶಿರಸಿಯಿಂದ ಹೊನ್ನಾವರದತ್ತ ಹೋಗುತ್ತಿದ್ದಾಗ ಮುಂದೆ ಸಾಗುತ್ತಿದ್ದ ಸ್ಕಾರ್ಪಿಯೊ ವಾಹನದ ಚಾಲಕ ದಿಢೀರನೇ ಬಲಕ್ಕೆ ತಿರುವು ತೆಗೆದುಕೊಂಡರು. ಆಗ ಬೆಂಗಾವಲು ವಾಹನದ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಈ ವೇಳೆ, ಈ ವಾಹನದ ಹಿಂದಿದ್ದ ಸಚಿವರ ಕಾರಿನ ಚಾಲಕ ಕೂಡ ಬ್ರೇಕ್ ಹಾಕಿದರಾದರೂ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಯಿತು. ಪೊಲೀಸರು ಕೂಡಲೇ ಮತ್ತೊಂದು ವಾಹನದ ಮೂಲಕ ಸಚಿವರನ್ನು ಹೊನ್ನಾವರಕ್ಕೆ ಕಳುಹಿಸಿಕೊಟ್ಟರು.