ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಗೆ ನೀರು ತರಲು ಹೋದ ಬಾಲಕ ನೀರುಪಾಲು

Last Updated 29 ಜೂನ್ 2020, 15:18 IST
ಅಕ್ಷರ ಗಾತ್ರ

ದಾವಣಗೆರೆ: ಪೂಜೆಗೆಂದು ನೀರು ತರಲು ಹೋದ ಬಾಲಕನೊಬ್ಬ ತಾಲ್ಲೂಕಿನ ಹೊನ್ನೂರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಗ್ರಾಮದ ಕೃಷಿಕ ಮಂಜುನಾಥ್ ಎಂಬುವರ ಮಗ ಗುಣಶೇಖರ್ (14) ಮೃತ ಬಾಲಕ. 8ನೇ ತರಗತಿ ಓದುತ್ತಿದ್ದ ಈತ ತಂದೆ-ತಾಯಿಯ ಜೊತೆಯಲ್ಲಿ ದೇವರ ಕಾರ್ಯಕ್ಕೆಂದು ಜಮೀನಿಗೆ ತೆರಳಿದ್ದ ವೇಳೆ ದೇವರ ಪೂಜೆಗಾಗಿ ನೀರು ತರಲು ಕೆರೆಗೆ ಬಂದಿದ್ದಾನೆ.

ಮಗ ಬಾರದೇ ಇದ್ದುದರಿಂದ ಆತಂಕಗೊಂಡ ತಂದೆ–ತಾಯಿಗಳು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಆನಂತರ ಕೆರೆಯ ಬಳಿ ಬಂದು ನೋಡಿದಾಗ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT