ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜವಿಜ್ಞಾನಗಳ ನಿಕಾಯದ ಡೀನ್ ಹಾಗೂ ಹಿರಿಯ ಪ್ರಾಧ್ಯಾಪಕ ಡಾ. ಸಿ.ಎಸ್. ವಾಸುದೇವನ್ (57) ಮೃತರು. ಮೈಸೂರಿನ ನಿವಾಸಿಯಾಗಿರುವ ವಾಸುದೇವನ್ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಅವರ ಪುತ್ರ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಶ್ರೇಯಸ್, ಪಿಎಚ್. ಡಿ ವಿದ್ಯಾರ್ಥಿನಿಯರಾದ ಸಂಡೂರಿನ ನಿರ್ಮಲಾ ಹಾಗೂ ಕಿತ್ತೂರಿನ ರಾಜೇಶ್ವರಿ ಕಡ್ಲಿಬುಡ್ಡಿ ಅವರು ತೀವ್ರವಾಗಿ ಗಾಯಗೊಂಡಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.