ಮೆಕ್ಕೆಜೋಳ 26 ಹೆಕ್ಟೇರ್, ರಾಗಿ – 89.6 ಹೆಕ್ಟೇರ್, ಭತ್ತ -179 ಹೆಕ್ಟೇರ್ ಹಾನಿ ಅಂದಾಜಿಸಲಾಗಿದೆ. ನದಿ ತೀರದಲ್ಲಿ 3,500 ಚೀಲ ಭತ್ತ ನದಿಪಾಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಇದರ ಬಗ್ಗೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ, 60 ಹೆಕ್ಟರ್ ಈರುಳ್ಳಿ ಬೆಳೆಯು ಹಾನಿಯಾಗಿದೆ, ಪಪ್ಪಾಯಿ, ರಾಗಿ, ಬೆಳೆ, ಭತ್ತದ ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ರಾಶಿ ಮಾಡಿದ್ದ ಮೆಕ್ಕೆಜೋಳ ತೆನೆಗಳು ಫಲ ಬಂದಿದ್ದು ರೈತರಿಗೆ ತೊಂದರೆ ಆಗಿದೆ. ಹಾನಿ ಪ್ರದೇಶಗಳನ್ನೆಲ್ಲಾ ವೀಕ್ಷಿಸಿದ್ದು ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.