‘ಶುಕ್ರವಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿಗಳು ಕಚೇರಿಯ ಬಿಎಫ್ಟಿ ವೀಣಾ ಅವರೊಂದಿಗೆ ನರೇಗಾ ಕೆಲಸದ ಬಗ್ಗೆ ಮಾಹಿತಿ ಕೇಳಿದರು. ಅವರು ನಿಮ್ಮ ಅರ್ಜಿ ನಮೂನೆ-6ನ್ನು ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದಾಗ ನಮಗೆ ಅರಣ್ಯ ಇಲಾಖೆ ಬೇಡ, ಕೆರೆ ಹೂಳು ಎತ್ತುವ ಕೆಲಸ ಕೊಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತ ಅವರನ್ನು ಎಳೆದಾಡಿದರು. ಅವರು ತಪ್ಪಿಸಿಕೊಂಡುಹೊರಬಂದರು. ಪಕ್ಕದಲ್ಲಿದ್ದ ಕಂಪ್ಯೂಟರ್ ಆಪರೇಟರ್ ರಜನಿ ಅವರಿಗೂ ಬೈಯುತ್ತ ಉಗುಳಿದರು. ಕಚೇರಿಯ ಕುರ್ಚಿಗಳನ್ನು ಮುರಿದು ಹಾಕಿದರು. ಸಾರ್ವಜನಿಕವಾಗಿನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಜೆ. ಆಶಾ, ಬಿಎಫ್ಟಿ ಕರ್ತವ್ಯ ನಿರ್ವಹಿಸುವ ವೀಣಾ, ಕಂಪ್ಯೂಟರ್ ಆಪರೇಟರ್ ರಜನಿ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರುನೀಡಿದ್ದಾರೆ.