<p><strong>ಮಲೇಬೆನ್ನೂರು</strong>: ಸಮೀಪದ ಹಳ್ಳೀಹಾಳ್ ಗ್ರಾಮದ ಮುರುಡ ಬಸವೇಶ್ವರ ಹಾಗೂ ವಡೆಯರ ಬಸವಾಪುರ ಗ್ರಾಮದ ಬಸವೇಶ್ವರ ದೇವರ ರಥೋತ್ಸವ ಬುಧವಾರ ವೈಭವದಿಂದ ಜರುಗಿತು. </p>.<p>ಸಾಂಪ್ರದಾಯಿಕ ರಥಪೂಜೆ, ಬಲಿದಾನದ ನಂತರ ರಥಾರೋಹಣವಾಯಿತು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಹಾಗೂ ಚಕ್ರಕ್ಕೆ ತೆಂಗಿನಕಾಯಿ ಸಮರ್ಪಣೆ ಮಾಡಿ ‘ಹರಹರ ಮಹಾದೇವ’, ‘ಬಸವೇಶ್ವರ ಮಹಾರಾಜ್ ಕೀ ಜೈ’ ಎಂದು ಘೋಷಣೆ ಹಾಕುತ್ತಾ ರಥ ಎಳೆದರು. </p>.<p>ತಮಟೆ, ಡೊಳ್ಳು, ಪುರವಂತರ ವೀರಭದ್ರ ದೇವರ ಕುಣಿತ, ಕೀಲುಕುದುರೆ ಕುಣಿತ, ಮಂಗಳವಾದ್ಯ ಉತ್ಸವಕ್ಕೆ ಕಳೆ ತಂದಿವೆ. </p>.<p>ದೇವಾಲಯ, ಮುಖ್ಯಬೀದಿಗೆ ಮಿನುಗುವ ವಿದ್ಯುದ್ದೀಪ, ರಥಕ್ಕೆ ಧ್ವಜ ಹಾಗೂ ಹೂವಿನಿಂದ ಅಲಂಕರಿಸಿದ್ದರು. ಹೆಚ್ಚಿನ ಸಂಖ್ಯೆಯ ಭಕ್ತರು ಉತ್ಸವಕ್ಕೆ ಆಗಮಿಸಿದ್ದರು. </p>
<p><strong>ಮಲೇಬೆನ್ನೂರು</strong>: ಸಮೀಪದ ಹಳ್ಳೀಹಾಳ್ ಗ್ರಾಮದ ಮುರುಡ ಬಸವೇಶ್ವರ ಹಾಗೂ ವಡೆಯರ ಬಸವಾಪುರ ಗ್ರಾಮದ ಬಸವೇಶ್ವರ ದೇವರ ರಥೋತ್ಸವ ಬುಧವಾರ ವೈಭವದಿಂದ ಜರುಗಿತು. </p>.<p>ಸಾಂಪ್ರದಾಯಿಕ ರಥಪೂಜೆ, ಬಲಿದಾನದ ನಂತರ ರಥಾರೋಹಣವಾಯಿತು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಹಾಗೂ ಚಕ್ರಕ್ಕೆ ತೆಂಗಿನಕಾಯಿ ಸಮರ್ಪಣೆ ಮಾಡಿ ‘ಹರಹರ ಮಹಾದೇವ’, ‘ಬಸವೇಶ್ವರ ಮಹಾರಾಜ್ ಕೀ ಜೈ’ ಎಂದು ಘೋಷಣೆ ಹಾಕುತ್ತಾ ರಥ ಎಳೆದರು. </p>.<p>ತಮಟೆ, ಡೊಳ್ಳು, ಪುರವಂತರ ವೀರಭದ್ರ ದೇವರ ಕುಣಿತ, ಕೀಲುಕುದುರೆ ಕುಣಿತ, ಮಂಗಳವಾದ್ಯ ಉತ್ಸವಕ್ಕೆ ಕಳೆ ತಂದಿವೆ. </p>.<p>ದೇವಾಲಯ, ಮುಖ್ಯಬೀದಿಗೆ ಮಿನುಗುವ ವಿದ್ಯುದ್ದೀಪ, ರಥಕ್ಕೆ ಧ್ವಜ ಹಾಗೂ ಹೂವಿನಿಂದ ಅಲಂಕರಿಸಿದ್ದರು. ಹೆಚ್ಚಿನ ಸಂಖ್ಯೆಯ ಭಕ್ತರು ಉತ್ಸವಕ್ಕೆ ಆಗಮಿಸಿದ್ದರು. </p>