ಅರೆಹಳ್ಳಿ (ತ್ಯಾವಣಿಗೆ): ತ್ಯಾವಣಿಗೆ ಸಮೀಪದ ಅರೆಹಳ್ಳಿ ಗ್ರಾಮದಲ್ಲಿ ಮನೆಯ ಎದುರಿನ ಶೆಡ್ನಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಲಿಸಿ ಬಾಲಕ ಮೃತಪಟ್ಟಿದ್ದಾನೆ.
ಗ್ರಾಮದ ನಾಗರಾಜ ಅವರ ಪುತ್ರಮನು (7) ಮೃತಪಟ್ಟ ಬಾಲಕ.
ಮನೆ ಮುಂದಿನ ಶೆಡ್ ಬಳಿ ಮಕ್ಕಳೊಂದಿಗೆ ಮನು ಆಟವಾಡುತ್ತಿದ್ದ. ಶೆಡ್ನಲ್ಲಿನಿಲ್ಲಿಸಿದ್ದ ಟ್ರ್ಯಾಕ್ಟರ್ ಚಲಿಸಿ ಮನು ಮೇಲೆ ಹರಿದಿದೆ.
‘ಏಕಾಏಕಿಟ್ರ್ಯಾಕ್ಟರ್ ಚಲಿಸುತ್ತಿದ್ದಾಗ ಇತರ ಮಕ್ಕಳಿಗೆ ಬೇರೆಡೆ ಸರಿಯುವಂತೆ ಸೂಚಿಸಿದ್ದ ಮನು ಟ್ರ್ಯಾಕ್ಟರ್ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.