ಭಗತ್ ಸಿಂಗ್ನಗರದ ಡೇವಿಡ್ ಅವರ ಮಗ ಸಚಿನ್ (15) ಮೃತಪಟ್ಟವನು. ಭಾನುವಾರ ರಜೆ ಇದ್ದಿದ್ದರಿಂದ ಗೆಳೆಯರ ಜತೆಗೆ ಸುತ್ತಾಡುತ್ತಾ ಆಟವಾಡಲು ಹೋಗಿದ್ದ. ಡಿಸಿಎಂ ಟೌನ್ಶಿಪ್ ಬಳಿ ರೈಲು ಬರುತ್ತಿದ್ದಾಗಲೇ ದಾಟಲು ಮುಂದಾಗಿದ್ದರಿಂದ ರೈಲು ಡಿಕ್ಕಿ ಹೊಡೆದಿದೆ. ತಲೆಗೆ ಏಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.