ಚನ್ನಗಿರಿ ತಾಲ್ಲೂಕು ಕತ್ತಲಗೆರೆ ರೈತಬಂಧು ಕೋ ಆಪರೇಟಿವ್ ಸೊಸೈಟಿಯ ನೋಂದಣಿಗಾಗಿ ಕತ್ತಲಗೆರೆ ರುದ್ರೇಶ್ ಎಂಬವರು ಮಾರ್ಚ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಿ ಮಾಡಿರಲಿಲ್ಲ. ಬುಧವಾರ ರುದ್ರೇಶ್ ಸಹಕಾರ ಸಂಸ್ಥೆಗಳ ನೋಂದಣಿ ಕಚೇರಿಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದ್ದಾರೆ. ₹ 25 ಸಾವಿರ ನೀಡಿದರೆ ನೋಂದಣಿ ಮಾಡಿಸಿಕೊಡುವುದಾಗಿ ಗೀತಾ ಭರವಸೆ ನೀಡಿದ್ದರು. ಗುರುವಾರ ₹ 15 ಸಾವಿರ ನೀಡುವುದಾಗಿ ರುದ್ರೇಶ್ ತಿಳಿಸಿ ಬಂದವರು ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿದ್ದರು.