ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಸ್ವೀಕಾರ: ಸಹಾಯಕ ನೋಂದಣಿ ಅಧಿಕಾರಿ ಎಸಿಬಿ ಬಲೆಗೆ

Last Updated 5 ಜುಲೈ 2018, 13:46 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾನಗರದಲ್ಲಿರುವ ಸಹಕಾರ ಸಂಸ್ಥೆಗಳ ನೋಂದಣಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ನೋಂದಣಿ ಅಧಿಕಾರಿ ಗೀತಾ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚನ್ನಗಿರಿ ತಾಲ್ಲೂಕು ಕತ್ತಲಗೆರೆ ರೈತಬಂಧು ಕೋ ಆಪರೇಟಿವ್‌ ಸೊಸೈಟಿಯ ನೋಂದಣಿಗಾಗಿ ಕತ್ತಲಗೆರೆ ರುದ್ರೇಶ್‌ ಎಂಬವರು ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಿ ಮಾಡಿರಲಿಲ್ಲ. ಬುಧವಾರ ರುದ್ರೇಶ್‌ ಸಹಕಾರ ಸಂಸ್ಥೆಗಳ ನೋಂದಣಿ ಕಚೇರಿಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದ್ದಾರೆ. ₹ 25 ಸಾವಿರ ನೀಡಿದರೆ ನೋಂದಣಿ ಮಾಡಿಸಿಕೊಡುವುದಾಗಿ ಗೀತಾ ಭರವಸೆ ನೀಡಿದ್ದರು. ಗುರುವಾರ ₹ 15 ಸಾವಿರ ನೀಡುವುದಾಗಿ ರುದ್ರೇಶ್‌ ತಿಳಿಸಿ ಬಂದವರು ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಸಿದ್ದರು.

ಗುರುವಾರ ಮಧ್ಯಾಹ್ನ ರುದ್ರೇಶ್‌ ಅವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಗೀತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT