ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ, ‘ಸಕಾರಾತ್ಮಕ ಚಿಂತನೆ, ಸೃಜನಶೀಲ ವ್ಯಕ್ತಿತ್ವ, ವಾಕ್ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ತಂತ್ರಗಾರಿಕೆ ಮುಂತಾದ ಕೌಶಲಗಳನ್ನು ಮೈಗೂಡಿಸಿಕೊಂಡು ಮಾದರಿ ಶಿಕ್ಷಕರಾಗಬೇಕು. ಕಲಿಕೆಯ ಅನುಭವ, ಗುರಿ ತಲುಪುವ ಶ್ರಮ, ಹೊಸ ಜ್ಞಾನದ ವರ್ತನೆ ಮತ್ತು ಕೌಶಲಗಳು ಕೆಲವು ಭಾರಿ ವಿರುದ್ಧವಾಗಿ ಇರುವುದೂ ಇರುತ್ತದೆ. ಕಲಿಕೆ ಮತ್ತು ಬೋಧನೆ ಈ ರೀತಿ ಚಂಚಲವಾಗಿರುವುದನ್ನೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.