‘ರವೀಂದ್ರನಾಥ್ ನನಗೆ ಹಳೆಯ ಪರಿಚಯ. ಸಂಬಂಧಿಕರು, ನನಗೆ ಅಣ್ಣ ಆಗಬೇಕು. ಅವರು ಚೌಕಿಪೇಟೆಯಲ್ಲಿ ಅಂಗಡಿ ಇಟ್ಟಿದ್ದಾಗ ನಾವೂ ಅವರ ಅಂಗಡಿಗೆ ಹೋಗುತ್ತಿದ್ದೆವು. ಅವರು ಒಬ್ಬರೇ ಹೋರಾಟ ಮಾಡಿಕೊಂಡು ಬರುತ್ತಿದ್ದರು. ಅಂದಿನಿಂದಲೂ ಅವರನ್ನು ನಾನು ಬಲ್ಲೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಸಂಬಂಧಿಕರು, ಆದರೆ ರವೀಂದ್ರನಾಥ್ಗೂ ಇವರಿಗೂ ಬಹಳ ವ್ಯತ್ಯಾಸ ಇದೆ. ರವೀಂದ್ರನಾಥ್ ತೂಕಾನೇ ಬೇರೆ. ಅವರು ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಗೌರವ ಇದೆ. ರವೀಂದ್ರನಾಥ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ ಅದಕ್ಕೇನು ಅರ್ಥ’ ಎಂದು ಪ್ರಶ್ನಿಸಿದರು.