ಕೇದಾರಪೀಠದ ಭೀಮಾಶಂಕರ ಭಗವಾತ್ಪಾದರು, ‘ಮುಂಬರುವ ಮೇ ತಿಂಗಳಲ್ಲಿ ಈ ವರ್ಷದ ಕೇದಾರನಾಥನ ದರ್ಶನ ಪ್ರಾರಂಭವಾಗಲಿದ್ದು, ಭಕ್ತರು ಚಿನ್ನದ ಕಿರೀಟವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಈ ಹಿಂದೆ ಜಲಪ್ರಳಯದಿಂದ ಹಿಮಾಲಯದ ಕೇದಾರನಾಥನ ಚಿನ್ನದ ಕಿರೀಟ ಮುಡಿಯಲ್ಲಿ ಇರಲಿಲ್ಲ. ಹಾಗಾಗಿ ಭಕ್ತರಲ್ಲಿ ನಿರಾಸೆಯಾಗಿತ್ತು. ಈಗ ಕೇದಾರನಾಥನಿಗೆ ಒಂದು ಕೆಜಿ ತೂಕದ ವಜ್ರಖಚಿತ ಕಿರೀಟವು ಸಿದ್ಧಗೊಂಡಿರುವುದು ಸಂತೋಷದ ಸಂಗತಿ’ ಎಂದರು.