‘ಕಾರ್ಯಾಗಾರವನ್ನು ಬೇಕಾಬಿಟ್ಟಿಯಾಗಿ ಆಯೋಜಿಸಲಾಗಿದೆ. ಇಲ್ಲಿ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ನಾಮಕಾವಸ್ಥೆ ಕಾರ್ಯಕ್ರಮ ಮಾಡಲಾಗಿದೆ’ ಎಂದು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ತಾರಾ ಮತ್ತ ಪ್ರಧಾನ ಕಾರ್ಯದರ್ಶಿ ಲೀಲಾವತಿ ದೂರಿದರು.
ಖುರ್ಚಿ ಇಲ್ಲ, ಊಟವೂ ಇಲ್ಲ...
ಕನಿಷ್ಟ ಸೌಲಭ್ಯವನ್ನು ನೀಡಲಾಗದ ಇಂತಹ ಕಾರ್ಯಾಗಾರಗಳನ್ನು ಯಾತಕ್ಕಾಗಿ ಆಯೋಜಿಸಬೇಕು. ನಮ್ಮನ್ನು ಕುರಿಗಳು ಎಂದು ತಿಳಿದಿದ್ದಾರೆಯೇ ಎಂದು ಪ್ರಶ್ನಿಸಿದ ಅಧ್ಯಕ್ಷೆ ತಾರಾ, ಕಾರ್ಯಾಗಾರದಲ್ಲಿ ಸುಮಾರು 750ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದೆವು. ಎಲ್ಲರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರಲಿಲ್ಲ. ಒಬ್ಬರ ಮೇಲೋಬ್ಬರು ಕುಳಿತುಕೊಳ್ಳಬೇಕಾಯಿತು. ಕನಿಷ್ಟ ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಕೇವಲ 70- 80 ಜನರಿಗೆ ಸಾಕಾಗುವಷ್ಟು ಊಟ ತರಿಸಲಾಗಿತ್ತು. ಹಲವರು ಉಪವಾಸ ಆಚರಿಸಬೇಕಾಯಿತು. ಕಾರ್ಯಾಗಾರಕ್ಕೆ ಕಡ್ಡಾಯವಾಗಿ ಬರಬೇಕು ಎಂದು ಠರಾವು ಹೊರಡಿಸುವ ಅಧಿಕಾರಿಗಳು ಹಾಜರಾಗುವವರಿಗೆ ವಾಹನ ಭತ್ಯೆ ನೀಡುತ್ತಿಲ್ಲ. ನಮ್ಮ ಕೈಯಿಂದಲೇ ಹಣ ಹಾಕಿಕೊಂಡು ಬರಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.