<p><strong>ಮಲೇಬೆನ್ನೂರು</strong>: ಎರಡು ವರ್ಷಗಳ ಬಳಿಕ ಪುರಸಭೆ ಸಾಮಾನ್ಯ ಸಭೆಯು ಪ್ರಭಾರ ಅಧ್ಯಕ್ಷೆ ನಪ್ಸಿಯಾಬಾನು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಹೆಚ್ಚು ಸಮಯ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಕುರಿತ ಚರ್ಚೆ ನಡೆಯಿತು.</p>.<p>ಸಭೆ ಆರಂಭವಾಗುತ್ತಿದ್ದಂತೆ ಸ್ಥಾಯಿ ಸಮಿತಿಗೆ 8 ಜನ ಸದಸ್ಯರ ಹೆಸರನ್ನು ಸದಸ್ಯ ಷಾ ಅಬ್ರಾರ್ ಸೂಚಿಸಿದರು. ಸಾಬೀರ್ ಅಲಿ ಅನುಮೋದಿಸಿದರು.</p>.<p>ಜೆಡಿಎಸ್- ಬಿಜೆಪಿಯ 7 ಸದಸ್ಯರಿದ್ದರೂ ಕಾಂಗ್ರೆಸ್ಸಿಗರ ಹಸರನ್ನು ಸೂಚಿಸಿ ಅನುಮೋದಿಸಲಾಗಿದೆ. ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ ಎಂದು ಸಿದ್ದೇಶ್ ಬೇಸರ ವ್ಯಕ್ತಪಡಿಸಿದರು. </p>.<p>ಸದಸ್ಯ ಕೆ.ಜಿ. ಲೋಕೇಶ್, ‘ಉಪಾಧ್ಯಕ್ಷರು ಮಹಿಳೆಯೇ ಇದ್ದಾರೆ’ ಎಂದು ಸಮರ್ಥಿಸಿದರು.</p>.<p>ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರವನ್ನು ಕಾಂಗ್ರೆಸ್ನ ನಯಾಜ್, ದಾದಾಪೀರ್, ಮಂಜುನಾಥ್, ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಪ್ರತಿಪಾದಿಸಿದರು.</p>.<p>‘ಶತಮಾನ ಕಂಡ ಶಾಲೆಯನ್ನು ಒಡೆಯುವ ಬದಲು ಬೇರೆ ಜಾಗ ಆಯ್ಕೆ ಮಾಡಿ’ ಎಂದು ಬಿಜೆಪಿಯ ಹನುಮಂತಪ್ಪ ಸಲಹೆ ನೀಡಿದರು.</p>.<p>‘ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರ ನ್ಯಾಯಾಲಯದಲ್ಲಿದ್ದು, ಮಾಹಿತಿ ಬಂದಿಲ್ಲ’ ಎಂದು ಮುಖ್ಯಾಧಿಕಾರಿ ಬಜಕ್ಕನವರ್ ತಿಳಿಸಿದರು.</p>.<p>ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಅವರೂ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿರುವ ಕುರಿತ ದಾಖಲೆಯನ್ನು ಪ್ರದರ್ಶಿಸಿದರು.</p>.<p>ಶಾಸಕ ಹರೀಶ್, ‘ಉಪವಿಭಾಗಾಧಿಕಾರಿ ಅವರು ನೀಡಿರುವ ವರದಿ ಮಂಡಿಸಿ’ ಎಂದು ಮುಖ್ಯಾಧಿಕಾರಿ ಅವರನ್ನು ಕೇಳಿದರು.</p>.<p>‘ಮುಖ್ಯಾಧಿಕಾರಿ ಅವರು ವರದಿ ನೀಡಿದ ಕಾರಣ ಮುಂದಿನ ಸಭೆಗೆ ದಾಖಲೆಯೊಂದಿಗೆ ಬನ್ನಿ’ ಎಂದು ಶಾಸಕರು ಸೂಚಿಸಿ ಸಭೆಯಿಂದ ನಿರ್ಗಮಿಸಿದರು.</p>.<p>ನಂತರದಲ್ಲಿ ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ಅನುಮೋದಿಸಿದರು.</p>.<p>‘₹ 10 ಕೋಟಿ ವೆಚ್ಚದ ನಗರೋತ್ಥಾನ ಯೋಜನೆ ಅಡಿ ಕಳಪೆ ಕಾಮಗಾರಿ ನಡೆದಿದೆ ಎಂದು ನಾಗರಿಕರು ದೂರಿದ್ದು, ಮಾಹಿತಿ ನೀಡಿ’ ಎಂದು ಸದಸ್ಯರು ಒತ್ತಾಯಿಸಿದರು.</p>.<p>ಸ್ವಾಗತ ಕಮಾನು ನಿರ್ಮಾಣ, ಗ್ರಂಥಾಲಯ ಕಟ್ಟಡ, ಪಶುವೈದ್ಯ ಆಸ್ಪತ್ರೆ ಜಾಗದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ನಾಯಿ ಸಮಸ್ಯೆ ಕುರಿತು ವಿಜಯಲಕ್ಷ್ಮಿ, ಸುಧಾ ಸಭೆಯಲ್ಲಿ ಚರ್ಚಿಸಿದರು.</p>.<p>ಮುಂದಿನಸಭೆಯಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಸಮಸ್ಯೆ ಪರಿಸುವುದಾಗಿ ಮುಖ್ಯಾಧಿಕಾರಿ ಹೇಳಿದರು.</p>.<p>ಅಮೃತ್ ಕುಡಿಯುವ ನೀರಿನ ಯೋಜನೆ, ಪುರಸಭಾ ಕಟ್ಟಡಕ್ಕೆ ನೀರಾವರಿ ನಿಗಮದ ಮೈದಾನದ ನಿವೇಶನ ಪಡೆಯುವ ಕುರಿತು ಚರ್ಚೆ ನಡೆಯಿತು.</p>.<p>ಪರಿಸರ ಎಂಜಿನಿಯರ್ ಉಮೇಶ್, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಆರೋಗ್ಯ ವಿಭಾಗದ ನವೀನ್, ಶಿವರಾಜ್, ಅವಿನಾಶ್, ಕಂದಾಯಾಧಿಕಾರಿ ಧನಂಜಯ, ಇಮ್ರಾನ್, ಜೆಇ ರಾಘವೇಂದ್ರ, ಖೀಜರ್, ಸಮುದಾಯ ಸಂಘಟನಾಧಿಕಾರಿ ನಿಟುವಳ್ಳಿ ದಿನಕರ್, ಪುರಸಭೆ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಎರಡು ವರ್ಷಗಳ ಬಳಿಕ ಪುರಸಭೆ ಸಾಮಾನ್ಯ ಸಭೆಯು ಪ್ರಭಾರ ಅಧ್ಯಕ್ಷೆ ನಪ್ಸಿಯಾಬಾನು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಹೆಚ್ಚು ಸಮಯ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಕುರಿತ ಚರ್ಚೆ ನಡೆಯಿತು.</p>.<p>ಸಭೆ ಆರಂಭವಾಗುತ್ತಿದ್ದಂತೆ ಸ್ಥಾಯಿ ಸಮಿತಿಗೆ 8 ಜನ ಸದಸ್ಯರ ಹೆಸರನ್ನು ಸದಸ್ಯ ಷಾ ಅಬ್ರಾರ್ ಸೂಚಿಸಿದರು. ಸಾಬೀರ್ ಅಲಿ ಅನುಮೋದಿಸಿದರು.</p>.<p>ಜೆಡಿಎಸ್- ಬಿಜೆಪಿಯ 7 ಸದಸ್ಯರಿದ್ದರೂ ಕಾಂಗ್ರೆಸ್ಸಿಗರ ಹಸರನ್ನು ಸೂಚಿಸಿ ಅನುಮೋದಿಸಲಾಗಿದೆ. ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ ಎಂದು ಸಿದ್ದೇಶ್ ಬೇಸರ ವ್ಯಕ್ತಪಡಿಸಿದರು. </p>.<p>ಸದಸ್ಯ ಕೆ.ಜಿ. ಲೋಕೇಶ್, ‘ಉಪಾಧ್ಯಕ್ಷರು ಮಹಿಳೆಯೇ ಇದ್ದಾರೆ’ ಎಂದು ಸಮರ್ಥಿಸಿದರು.</p>.<p>ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರವನ್ನು ಕಾಂಗ್ರೆಸ್ನ ನಯಾಜ್, ದಾದಾಪೀರ್, ಮಂಜುನಾಥ್, ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಪ್ರತಿಪಾದಿಸಿದರು.</p>.<p>‘ಶತಮಾನ ಕಂಡ ಶಾಲೆಯನ್ನು ಒಡೆಯುವ ಬದಲು ಬೇರೆ ಜಾಗ ಆಯ್ಕೆ ಮಾಡಿ’ ಎಂದು ಬಿಜೆಪಿಯ ಹನುಮಂತಪ್ಪ ಸಲಹೆ ನೀಡಿದರು.</p>.<p>‘ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರ ನ್ಯಾಯಾಲಯದಲ್ಲಿದ್ದು, ಮಾಹಿತಿ ಬಂದಿಲ್ಲ’ ಎಂದು ಮುಖ್ಯಾಧಿಕಾರಿ ಬಜಕ್ಕನವರ್ ತಿಳಿಸಿದರು.</p>.<p>ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಅವರೂ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿರುವ ಕುರಿತ ದಾಖಲೆಯನ್ನು ಪ್ರದರ್ಶಿಸಿದರು.</p>.<p>ಶಾಸಕ ಹರೀಶ್, ‘ಉಪವಿಭಾಗಾಧಿಕಾರಿ ಅವರು ನೀಡಿರುವ ವರದಿ ಮಂಡಿಸಿ’ ಎಂದು ಮುಖ್ಯಾಧಿಕಾರಿ ಅವರನ್ನು ಕೇಳಿದರು.</p>.<p>‘ಮುಖ್ಯಾಧಿಕಾರಿ ಅವರು ವರದಿ ನೀಡಿದ ಕಾರಣ ಮುಂದಿನ ಸಭೆಗೆ ದಾಖಲೆಯೊಂದಿಗೆ ಬನ್ನಿ’ ಎಂದು ಶಾಸಕರು ಸೂಚಿಸಿ ಸಭೆಯಿಂದ ನಿರ್ಗಮಿಸಿದರು.</p>.<p>ನಂತರದಲ್ಲಿ ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ಅನುಮೋದಿಸಿದರು.</p>.<p>‘₹ 10 ಕೋಟಿ ವೆಚ್ಚದ ನಗರೋತ್ಥಾನ ಯೋಜನೆ ಅಡಿ ಕಳಪೆ ಕಾಮಗಾರಿ ನಡೆದಿದೆ ಎಂದು ನಾಗರಿಕರು ದೂರಿದ್ದು, ಮಾಹಿತಿ ನೀಡಿ’ ಎಂದು ಸದಸ್ಯರು ಒತ್ತಾಯಿಸಿದರು.</p>.<p>ಸ್ವಾಗತ ಕಮಾನು ನಿರ್ಮಾಣ, ಗ್ರಂಥಾಲಯ ಕಟ್ಟಡ, ಪಶುವೈದ್ಯ ಆಸ್ಪತ್ರೆ ಜಾಗದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ನಾಯಿ ಸಮಸ್ಯೆ ಕುರಿತು ವಿಜಯಲಕ್ಷ್ಮಿ, ಸುಧಾ ಸಭೆಯಲ್ಲಿ ಚರ್ಚಿಸಿದರು.</p>.<p>ಮುಂದಿನಸಭೆಯಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಸಮಸ್ಯೆ ಪರಿಸುವುದಾಗಿ ಮುಖ್ಯಾಧಿಕಾರಿ ಹೇಳಿದರು.</p>.<p>ಅಮೃತ್ ಕುಡಿಯುವ ನೀರಿನ ಯೋಜನೆ, ಪುರಸಭಾ ಕಟ್ಟಡಕ್ಕೆ ನೀರಾವರಿ ನಿಗಮದ ಮೈದಾನದ ನಿವೇಶನ ಪಡೆಯುವ ಕುರಿತು ಚರ್ಚೆ ನಡೆಯಿತು.</p>.<p>ಪರಿಸರ ಎಂಜಿನಿಯರ್ ಉಮೇಶ್, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಆರೋಗ್ಯ ವಿಭಾಗದ ನವೀನ್, ಶಿವರಾಜ್, ಅವಿನಾಶ್, ಕಂದಾಯಾಧಿಕಾರಿ ಧನಂಜಯ, ಇಮ್ರಾನ್, ಜೆಇ ರಾಘವೇಂದ್ರ, ಖೀಜರ್, ಸಮುದಾಯ ಸಂಘಟನಾಧಿಕಾರಿ ನಿಟುವಳ್ಳಿ ದಿನಕರ್, ಪುರಸಭೆ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>