ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಮಂಜರಿ ಕಾರ್ಯಕ್ರಮಕ್ಕೆ ನೂಕುನುಗ್ಗಲು

Last Updated 30 ಏಪ್ರಿಲ್ 2022, 3:53 IST
ಅಕ್ಷರ ಗಾತ್ರ

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಸಸಂಜೆ ವೀಕ್ಷಿಸಲು ಸಂಗೀತ ಪ್ರಿಯರ ಪ್ರವಾಹವೇ ಹರಿದು ಬಂದಿತ್ತು.

ಶಾಸಕ ಎಸ್.ವಿ. ರಾಮಚಂದ್ರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಚಂದನ್ ಶೆಟ್ಟಿ, ಗಾಯಕರಾದ ಅನುರಾಧಾ ಭಟ್ ಹಾಗೂ ಮಂಜುನಾಥ್ ಅವರ ತಂಡ ಪ್ರಸ್ತುತಪಡಿಸಿದ ಜನಪ್ರಿಯ ಹಾಡುಗಳು ಹಾಗೂ ನೃತ್ಯವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದರು. ಪಟ್ಟಣದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಾಕಲಾಗಿದ್ದ, 15 ಸಾವಿರ ಆಸನಗಳನ್ನು ಒಳಗೊಂಡ ವೈಭವೋಪೇತ ವೇದಿಕೆಯಲ್ಲಿ ಗಂಧರ್ವ ಈವೆಂಟ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ
ನೂರಕ್ಕೂ ಹೆಚ್ಚು ಕಲಾವಿದರು, ಗಾಯಕರು,‌ ನೃತ್ಯಪಟುಗಳು ನಾಲ್ಕು ತಾಸುಗಳ ಕಾಲ ನೀಡಿದ ಕಾರ್ಯಕ್ರಮವನ್ನು ಕೊನೆಯವರೆಗೂ ಪ್ರೇಕ್ಷಕರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT