ಇಲ್ಲಿನ ಲಕ್ಷ್ಮಿ ಫ್ಲೋರ್ ಮಿಲ್ ಬಳಿ ಇರುವ ಎಚ್.ಪಿ. ಪೆಟ್ರೋಲ್ ಮುಂಭಾಗ ವಿಭಾಗದ ಅಧ್ಯಕ್ಷ ಎಚ್.ಬಿ. ವೀರಭದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ನ ಸದಸ್ಯರು ಮಣ್ಣಿನಲ್ಲಿ ಅಣಕು ಸಮಾಧಿ ರಚಿಸಿ ಅದರ ಮೇಲೆ ನರೇಂದ್ರ ಮೋದಿ ಭಾವಚಿತ್ರವಿಟ್ಟು, ಕಲ್ಲಿನ ಮೇಲೆ ಹೂವಿನ ಹಾರ ಹಾಕಿ, ಅರಿಶಿನ, ಕುಂಕುಮವನ್ನು ಎರಚಿ ಪ್ರತಿಭಟನೆ ನಡೆಸಿದರು.