<p><strong>ದಾವಣಗೆರೆ</strong>: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆಗಿದ್ದರಿಂದ ನೊಂದು ಪತಿ, ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. </p>.<p>ನಗರದ ನಿವಾಸಿ ಶಿವಕುಮಾರ ಅಲಿಯಾಸ್ ಕುಮಾರ್ ಬಂಧಿತ ಆರೋಪಿ. ಬುಧವಾರವಷ್ಟೇ ಪ್ರಕರಣದ ಮತ್ತೊಬ್ಬ ಆರೋಪಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದರು. </p>.<p>ಮದುವೆಯಾದ 3 ತಿಂಗಳಲ್ಲೇ ಸರಸ್ವತಿ, ಪತಿ ಹರೀಶ್ ಅವರನ್ನು ತೊರೆದು ಪ್ರಿಯಕರ ಕುಮಾರ್ ಜೊತೆ ಪರಾರಿಯಾಗಿದ್ದರು. ಇದರಿಂದ ನೊಂದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಈ ಜೋಡಿಗೆ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.</p>.<p class="Briefhead">ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ </p>.<p>ದಾವಣಗೆರೆ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. </p>.<p>ಚಿತ್ರದುರ್ಗದ ನರಸಿಂಹ ಮೂರ್ತಿ, ರಾಕೇಶ್ ಎಲ್., ದಾವಣಗೆರೆಯ ವಿನಯ ಕುಮಾರ, ರಾಹುಲ್ ಆರ್.ಬಿ., ಉಮೇಶ ಯು.ಸಿ. ಬಂಧಿತರು. </p>.<p>ಡಿಸೆಂಬರ್ 8ರಂದು ಹರಿಹರದಲ್ಲಿ ಕಾಲೇಜುವೊಂದರ ಕ್ಯಾಂಟಿನ್ ಮ್ಯಾನೇಜರ್ ಸುಧೀರ್ ಕುಮಾರ ಪಾಂಡೆ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು.</p>.<p>ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆಗಿದ್ದರಿಂದ ನೊಂದು ಪತಿ, ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. </p>.<p>ನಗರದ ನಿವಾಸಿ ಶಿವಕುಮಾರ ಅಲಿಯಾಸ್ ಕುಮಾರ್ ಬಂಧಿತ ಆರೋಪಿ. ಬುಧವಾರವಷ್ಟೇ ಪ್ರಕರಣದ ಮತ್ತೊಬ್ಬ ಆರೋಪಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದರು. </p>.<p>ಮದುವೆಯಾದ 3 ತಿಂಗಳಲ್ಲೇ ಸರಸ್ವತಿ, ಪತಿ ಹರೀಶ್ ಅವರನ್ನು ತೊರೆದು ಪ್ರಿಯಕರ ಕುಮಾರ್ ಜೊತೆ ಪರಾರಿಯಾಗಿದ್ದರು. ಇದರಿಂದ ನೊಂದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಈ ಜೋಡಿಗೆ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.</p>.<p class="Briefhead">ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ </p>.<p>ದಾವಣಗೆರೆ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. </p>.<p>ಚಿತ್ರದುರ್ಗದ ನರಸಿಂಹ ಮೂರ್ತಿ, ರಾಕೇಶ್ ಎಲ್., ದಾವಣಗೆರೆಯ ವಿನಯ ಕುಮಾರ, ರಾಹುಲ್ ಆರ್.ಬಿ., ಉಮೇಶ ಯು.ಸಿ. ಬಂಧಿತರು. </p>.<p>ಡಿಸೆಂಬರ್ 8ರಂದು ಹರಿಹರದಲ್ಲಿ ಕಾಲೇಜುವೊಂದರ ಕ್ಯಾಂಟಿನ್ ಮ್ಯಾನೇಜರ್ ಸುಧೀರ್ ಕುಮಾರ ಪಾಂಡೆ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು.</p>.<p>ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>