<p><strong>ದಾವಣಗೆರೆ:</strong> ಕೇತುಗ್ರಸ್ತ ಚಂದ್ರಗ್ರಹಣದ ಅಂಗವಾಗಿ ಜಿಲ್ಲೆಯ ಬಹುತೇಕ ದೇಗುಲಗಳು ಮಂಗಳವಾರ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದವು. ಸಂಜೆಯ ಬಳಿಕ ಬಾಗಿಲು ತೆರೆದು ಗ್ರಹಣ ದೋಷ ನಿವಾರಣೆಯ ಪೂಜಾ ಕೈಂಕರ್ಯಗಳು ಜರುಗಿದವು.</p>.<p>ನಗರದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ, ಲಿಂಗೇಶ್ವರ ದೇಗುಲ, ಬಕ್ಕೇಶ್ವರ ದೇವಸ್ಥಾನ, ಕೂಡಲಿ ಶಂಕರಮಠ, ಕಾಳಿಕಾದೇವಿ ದೇಗುಲ, ಕೆ.ಬಿ. ಬಡಾವಣೆಯ ರಾಘವೇಂದ್ರಸ್ವಾಮಿ ದೇಗುಲ, ವೀರಭದ್ರೇಶ್ವರ ದೇವಸ್ಥಾನ, ಶಿವಾಜಿ ಪ್ರತಿಮೆ ಸಮೀಪದ ಆಂಜನೇಯಸ್ವಾಮಿ ದೇಗುಲ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಬಾಗಿಲು ಮುಚ್ಚಿದ್ದವು.</p>.<p>ಗ್ರಹಣದ ಅವಧಿಯಲ್ಲಿ ಹಲವರು ಮನೆಯಿಂದ ಹೊರಗೆ ಬರಲಿಲ್ಲ. ಇದರಿಂದ ದೇಗಲುಗಳು ಬಿಕೊ ಎನ್ನುತ್ತಿದ್ದವು.</p>.<p>ಮಧ್ಯಾಹ್ನ 3.20ರಿಂದ ಚಂದ್ರಗ್ರಹಣ ಆರಂಭವಾಗಿತ್ತು. ಸಂಜೆ 6.20ರಿಂದ 6.40ರವರೆಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶವಿತ್ತು. ಗ್ರಹಣ ದರ್ಶನಕ್ಕೆ ಕಡಿಮೆ ಅವಧಿ ಇದ್ದ ಕಾರಣ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಿದಂತೆ ಕಾಣಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕೇತುಗ್ರಸ್ತ ಚಂದ್ರಗ್ರಹಣದ ಅಂಗವಾಗಿ ಜಿಲ್ಲೆಯ ಬಹುತೇಕ ದೇಗುಲಗಳು ಮಂಗಳವಾರ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದವು. ಸಂಜೆಯ ಬಳಿಕ ಬಾಗಿಲು ತೆರೆದು ಗ್ರಹಣ ದೋಷ ನಿವಾರಣೆಯ ಪೂಜಾ ಕೈಂಕರ್ಯಗಳು ಜರುಗಿದವು.</p>.<p>ನಗರದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ, ಲಿಂಗೇಶ್ವರ ದೇಗುಲ, ಬಕ್ಕೇಶ್ವರ ದೇವಸ್ಥಾನ, ಕೂಡಲಿ ಶಂಕರಮಠ, ಕಾಳಿಕಾದೇವಿ ದೇಗುಲ, ಕೆ.ಬಿ. ಬಡಾವಣೆಯ ರಾಘವೇಂದ್ರಸ್ವಾಮಿ ದೇಗುಲ, ವೀರಭದ್ರೇಶ್ವರ ದೇವಸ್ಥಾನ, ಶಿವಾಜಿ ಪ್ರತಿಮೆ ಸಮೀಪದ ಆಂಜನೇಯಸ್ವಾಮಿ ದೇಗುಲ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಬಾಗಿಲು ಮುಚ್ಚಿದ್ದವು.</p>.<p>ಗ್ರಹಣದ ಅವಧಿಯಲ್ಲಿ ಹಲವರು ಮನೆಯಿಂದ ಹೊರಗೆ ಬರಲಿಲ್ಲ. ಇದರಿಂದ ದೇಗಲುಗಳು ಬಿಕೊ ಎನ್ನುತ್ತಿದ್ದವು.</p>.<p>ಮಧ್ಯಾಹ್ನ 3.20ರಿಂದ ಚಂದ್ರಗ್ರಹಣ ಆರಂಭವಾಗಿತ್ತು. ಸಂಜೆ 6.20ರಿಂದ 6.40ರವರೆಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶವಿತ್ತು. ಗ್ರಹಣ ದರ್ಶನಕ್ಕೆ ಕಡಿಮೆ ಅವಧಿ ಇದ್ದ ಕಾರಣ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಿದಂತೆ ಕಾಣಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>