ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಸೋತು ಗೆದ್ದ ‘ಚಿನ್ನದ ವಿದ್ಯಾರ್ಥಿನಿ’

ಪಿಯುನಲ್ಲಿ ಅನುತ್ತೀರ್ಣಳಾಗಿದ್ದ ರಿಯಾಗೆ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ
Published : 3 ಏಪ್ರಿಲ್ 2025, 6:08 IST
Last Updated : 3 ಏಪ್ರಿಲ್ 2025, 6:08 IST
ಫಾಲೋ ಮಾಡಿ
Comments
ಯುಪಿಎಸ್‌ಸಿ ಪರೀಕ್ಷೆಗೆ ನೆರವಾಗುವ ಕಾರಣಕ್ಕೆ ಇಂಗ್ಲಿಷ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬುದು ನನ್ನ ಮಹದಾಸೆ
ಎಸ್‌.ಸ್ನೇಹಾ 3 ಚಿನ್ನದ ಪದಕ ವಿಜೇತೆ
ತಂದೆಯಂತೆ ನ್ಯಾಯಾಧೀಶೆ ಅಗಬೇಕು ಎಂಬುದು ನನ್ನ ಗುರಿ. ಬಿ.ಎಸ್ಸಿ ಬಳಿಕ ಕಾನೂನು ವ್ಯಾಸಂಗ ಮಾಡುತ್ತಿದ್ದೇನೆ. ಪದವಿಯಲ್ಲಿ ಚಿನ್ನದ ಪದಕ ಸಿಕ್ಕಿರುವುದು ಖುಷಿ ಕೊಟ್ಟಿದೆ
ರಕ್ಷಾ ವಿ.ಆನಂದ್‌ 3 ಚಿನ್ನದ ಪದಕ ವಿಜೇತೆ
ಆಟೊ ಚಾಲಕನ ಪುತ್ರಿಗೆ 4 ಪದಕ
ಆಟೊ ಚಾಲಕ ಚಿತ್ರದುರ್ಗದ ತಿಪ್ಪೇಸ್ವಾಮಿ ಅವರ ಪುತ್ರಿ ಆರ್‌.ಟಿ.ಶಾಶ್ವತಾ ಅರ್ಥಶಾಸ್ತ್ರ ವಿಭಾಗದಲ್ಲಿ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿತ್ರದುರ್ಗದ ಜಿ.ಆರ್‌.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿದ ಶಾಶ್ವತಾಗೆ ಹೆಚ್ಚು ಚಿನ್ನದ ಪದಕ ಸಿಕ್ಕ ಮಾಹಿತಿ ಘಟಿಕೋತ್ಸವಕ್ಕೆ ಬಂದಾಗಲೇ ತಿಳಿಯಿತು. ಆಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ‘ವಾಣಿಜ್ಯಶಾಸ್ತ್ರ ವ್ಯಾಸಂಗ ಮಾಡಬೇಕು ಎಂಬ ಹಂಬಲವಿತ್ತು. ಆದರೆ ಈ ವಿಭಾಗಕ್ಕೆ ಪ್ರವೇಶ ಪಡೆಯುವಷ್ಟು ಆರ್ಥಿಕ ಶಕ್ತಿ ಕುಟುಂಬದಲ್ಲಿ ಇರಲಿಲ್ಲ. ಆಟೊ ಚಾಲನೆ ಮಾಡುವ ತಂದೆಯ ದುಡಿಮೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಕಡಿಮೆ ಶುಲ್ಕ ಎಂಬ ಕಾರಣಕ್ಕೆ ಕಲಾ ವಿಭಾಗಕ್ಕೆ ಪ್ರವೇಶ ಪಡೆದಿದ್ದೆ. ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಆಗಬೇಕು ಎಂಬ ಗುರಿ ಇದೆ’ ಎಂದು ಸಂತಸ ಹಂಚಿಕೊಂಡರು.
ಪತ್ರಿಕೆ ಹಂಚಿ ಚಿನ್ನ ಗೆದ್ದ ಲಕ್ಷ್ಮಣ್‌
ಪತ್ರಿಕೆ ವಿತರಿಸುತ್ತ ಶಿಕ್ಷಣ ಮುಂದುವರಿಸಿದ ಆರ್‌.ಲಕ್ಷ್ಮಣ್‌ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಪತ್ನಿಯೊಂದಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದ ಇವರು ಪ್ರಥಮ ರ‍್ಯಾಂಕಿನೊಂದಿಗೆ ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೋಗುಂಡೆ ಗ್ರಾಮದ 38 ವರ್ಷದ ಆರ್‌.ಲಕ್ಷ್ಮಣ್‌ 10 ವರ್ಷದಿಂದ ಪತ್ರಿಕಾ ವಿತರಕರಾಗಿದ್ದಾರೆ. ‘ಪ್ರಜಾವಾಣಿ’ ಸೇರಿ ಹಲವು ಪತ್ರಿಕೆಗಳನ್ನು ಮನೆ–ಮನೆಗೆ ತಲುಪಿಸುತ್ತ ಶಿಕ್ಷಣವನ್ನು ಮುಂದುವರಿಸಿದ್ದಾರೆ. ‘ಪತ್ರಿಕೆಯ ಮೇಲಿನ ವ್ಯಾಮೋಹ ಸ್ನಾತಕೋತ್ತರ ಪದವಿಗೆ ಕರೆತಂದಿತು. ಪತ್ನಿ ಸುಮಲತಾ ಕನ್ನಡ ವಿಭಾಗಕ್ಕೆ ಪ್ರವೇಶ ಪಡೆದರು. ಬೆಳಿಗ್ಗೆ ಪತ್ರಿಕೆ ವಿತರಿಸಿ ಪತ್ನಿಯೊಂದಿಗೆ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದೆ’ ಎಂದು ಪುತ್ರಿಯ ಕೊರಳಿಗೆ ಚಿನ್ನದ ಪದಕ ಹಾಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT