<p><strong>ಮಲ್ಲಿಗೇನಹಳ್ಳಿ (ನ್ಯಾಮತಿ): </strong>ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಮುಖ್ಯಶಿಕ್ಷಕಿಯೊಬ್ಬರು ಪೋಷಕರನ್ನು ಪ್ರೇರೇಪಿಸಲು ವಿನೂತನವಾಗಿ ಶ್ರಮಿಸುತ್ತಿದ್ದಾರೆ.</p>.<p>ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸರ್ವಮಂಗಳಾ ಅವರು ಒಂದನೇ ತರಗತಿಗೆ ದಾಖಲಾದ 20 ಮಕ್ಕಳ ಹೆಸರಿನಲ್ಲಿ ತಲಾ ₹ 1 ಸಾವಿರವನ್ನು 5 ವರ್ಷದ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಮಗು ಶಾಲೆಯಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವ ಸಮಯದಲ್ಲಿ ಠೇವಣಿ ಮೊತ್ತ ಅವರ ಕೈಸೇರುವಂತೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರನ್ನು ಉತ್ತೇಜಿಸುತ್ತಿದ್ದಾರೆ. ಸಂಬಂಧಿಸಿದ ಠೇವಣಿಪತ್ರವನ್ನು ಮಕ್ಕಳಿಗೆ ಶನಿವಾರ ವಿತರಿಸಿದರು.</p>.<p>ಜಿಲ್ಲಾ ಅಕ್ಷರ ದಾಸೋಹ ಮೇಲ್ವಿಚಾರಕಿ ಡಾ.ಪುಷ್ಪಲತಾ, ತಾಲ್ಲೂಕು ಅಧಿಕಾರಿ ಕೆ.ರುದ್ರಪ್ಪ, ಸಿಆರ್ಪಿ ಡಿ.ನಾಗೇಶಪ್ಪ, ಎಸ್ಡಿಎಂಸಿ ಅಧ್ಯಕ್ಷ ಹರೀಶಗೌಡ, ಸಹ ಶಿಕ್ಷಕರಾದ ಮಂಜುಳಾ, ಅನಿತಾ, ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಜಿ. ಕುಬೇರಪ್ಪ ಹಾಗೂ ಪೋಷಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲ್ಲಿಗೇನಹಳ್ಳಿ (ನ್ಯಾಮತಿ): </strong>ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಮುಖ್ಯಶಿಕ್ಷಕಿಯೊಬ್ಬರು ಪೋಷಕರನ್ನು ಪ್ರೇರೇಪಿಸಲು ವಿನೂತನವಾಗಿ ಶ್ರಮಿಸುತ್ತಿದ್ದಾರೆ.</p>.<p>ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸರ್ವಮಂಗಳಾ ಅವರು ಒಂದನೇ ತರಗತಿಗೆ ದಾಖಲಾದ 20 ಮಕ್ಕಳ ಹೆಸರಿನಲ್ಲಿ ತಲಾ ₹ 1 ಸಾವಿರವನ್ನು 5 ವರ್ಷದ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ಮಗು ಶಾಲೆಯಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವ ಸಮಯದಲ್ಲಿ ಠೇವಣಿ ಮೊತ್ತ ಅವರ ಕೈಸೇರುವಂತೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರನ್ನು ಉತ್ತೇಜಿಸುತ್ತಿದ್ದಾರೆ. ಸಂಬಂಧಿಸಿದ ಠೇವಣಿಪತ್ರವನ್ನು ಮಕ್ಕಳಿಗೆ ಶನಿವಾರ ವಿತರಿಸಿದರು.</p>.<p>ಜಿಲ್ಲಾ ಅಕ್ಷರ ದಾಸೋಹ ಮೇಲ್ವಿಚಾರಕಿ ಡಾ.ಪುಷ್ಪಲತಾ, ತಾಲ್ಲೂಕು ಅಧಿಕಾರಿ ಕೆ.ರುದ್ರಪ್ಪ, ಸಿಆರ್ಪಿ ಡಿ.ನಾಗೇಶಪ್ಪ, ಎಸ್ಡಿಎಂಸಿ ಅಧ್ಯಕ್ಷ ಹರೀಶಗೌಡ, ಸಹ ಶಿಕ್ಷಕರಾದ ಮಂಜುಳಾ, ಅನಿತಾ, ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಜಿ. ಕುಬೇರಪ್ಪ ಹಾಗೂ ಪೋಷಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>