<p><strong>ಭದ್ರಾವತಿ:</strong> ಹಳೇ ನಗರದ ನಿರ್ಮಲ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರ ದಿನ ಆಚರಿಸಲಾಯಿತು. ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. </p>.<p>ಆಸ್ಪತ್ರೆಯ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ ಮಾತನಾಡಿ, ‘ವೈದ್ಯರು ತಮ್ಮ ಕುಟುಂಬ, ವೈಯಕ್ತಿಕ ಜೀವನಕ್ಕಿಂತ ರೋಗಿಗಳ ಹಿತ ಕಾಪಾಡುವಲ್ಲಿ ಮುಂದಿರುತ್ತಾರೆ. ವೈದ್ಯರ ಕೆಲಸ ವೃತ್ತಿಯಲ್ಲ, ಅದೊಂದು ಸೇವೆಯಾಗಿದೆ. ಹುಟ್ಟಿನಿಂದ ಸಾಯುವವರೆಗೂ ಜನರ ಜೊತೆ ಇರುವವರು ವೈದ್ಯರು’ ಎಂದರು. </p>.<p>ಡಾ. ಬೆಂಗಳೂರಿ ಮಾತನಾಡಿ, ‘ಅತ್ಯುತ್ತಮ ವೈದ್ಯನಾಗಲು ಪ್ರಾಮಾಣಿಕತೆ, ಸ್ನೇಹಪರ ಗುಣ ಹೊಂದಿರಬೇಕು. ವೈದ್ಯರು ತುರ್ತು ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸಮಯವನ್ನು ತ್ಯಾಗ ಮಾಡಲು ಸಿದ್ಧವಿರಬೇಕು’ ಎಂದರು. </p>.<p>ಡಾ.ರಿಜೀನಾ, ಡಾ.ಗ್ಲಾಡಿಸ್ ಪಿಂಟೋ, ಡಾ.ಅಂಜಲಿನ್ ಸಿಂತಿಯಾ ವಾಸ್, ಡಾ.ಸುನೀತಾ ಎಸ್., ಡಾ.ಎಸ್.ಮಲ್ಲಿಕಾರ್ಜುನ್, ಡಾ.ಸೈಯದ್ ಶಾಬುದ್ದೀನ್, ಡಾ.ಅನುಪಮಾ, ಡಾ.ನಿತಿನ್ ಕೆ.ಜಿ., ಡಾ.ಎಚ್.ಡಿ. ಅಶ್ವಥ್, ಡಾ.ರಕ್ಷಿತ್ ಎಂ.ಆರ್., ಡಾ.ರಾಮಕೃಷ್ಣ ಎಚ್.ಕೆ., ಡಾ.ಸ್ವರ್ಣಲತಾ ಎಂ.ಸಿ., ಡಾ.ಪ್ರೀತಿ ಜೆ.ಎಂ., ಡಾ.ಪುರುಷೋತ್ತಮ್ ಎಚ್., ಡಾ.ಶೋಭಾ ಎಚ್.ಡಿ. ಉಪಸ್ಥಿತರಿದ್ದರು. </p>.<p>ನಿರ್ಮಲ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಹಿಲರಿ, ನರ್ಸಿಂಗ್ ಸೂಪರಿಡೆಂಟ್ ಸಿಸ್ಟರ್ ವಿನ್ಸಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ಹಳೇ ನಗರದ ನಿರ್ಮಲ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರ ದಿನ ಆಚರಿಸಲಾಯಿತು. ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. </p>.<p>ಆಸ್ಪತ್ರೆಯ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ ಮಾತನಾಡಿ, ‘ವೈದ್ಯರು ತಮ್ಮ ಕುಟುಂಬ, ವೈಯಕ್ತಿಕ ಜೀವನಕ್ಕಿಂತ ರೋಗಿಗಳ ಹಿತ ಕಾಪಾಡುವಲ್ಲಿ ಮುಂದಿರುತ್ತಾರೆ. ವೈದ್ಯರ ಕೆಲಸ ವೃತ್ತಿಯಲ್ಲ, ಅದೊಂದು ಸೇವೆಯಾಗಿದೆ. ಹುಟ್ಟಿನಿಂದ ಸಾಯುವವರೆಗೂ ಜನರ ಜೊತೆ ಇರುವವರು ವೈದ್ಯರು’ ಎಂದರು. </p>.<p>ಡಾ. ಬೆಂಗಳೂರಿ ಮಾತನಾಡಿ, ‘ಅತ್ಯುತ್ತಮ ವೈದ್ಯನಾಗಲು ಪ್ರಾಮಾಣಿಕತೆ, ಸ್ನೇಹಪರ ಗುಣ ಹೊಂದಿರಬೇಕು. ವೈದ್ಯರು ತುರ್ತು ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸಮಯವನ್ನು ತ್ಯಾಗ ಮಾಡಲು ಸಿದ್ಧವಿರಬೇಕು’ ಎಂದರು. </p>.<p>ಡಾ.ರಿಜೀನಾ, ಡಾ.ಗ್ಲಾಡಿಸ್ ಪಿಂಟೋ, ಡಾ.ಅಂಜಲಿನ್ ಸಿಂತಿಯಾ ವಾಸ್, ಡಾ.ಸುನೀತಾ ಎಸ್., ಡಾ.ಎಸ್.ಮಲ್ಲಿಕಾರ್ಜುನ್, ಡಾ.ಸೈಯದ್ ಶಾಬುದ್ದೀನ್, ಡಾ.ಅನುಪಮಾ, ಡಾ.ನಿತಿನ್ ಕೆ.ಜಿ., ಡಾ.ಎಚ್.ಡಿ. ಅಶ್ವಥ್, ಡಾ.ರಕ್ಷಿತ್ ಎಂ.ಆರ್., ಡಾ.ರಾಮಕೃಷ್ಣ ಎಚ್.ಕೆ., ಡಾ.ಸ್ವರ್ಣಲತಾ ಎಂ.ಸಿ., ಡಾ.ಪ್ರೀತಿ ಜೆ.ಎಂ., ಡಾ.ಪುರುಷೋತ್ತಮ್ ಎಚ್., ಡಾ.ಶೋಭಾ ಎಚ್.ಡಿ. ಉಪಸ್ಥಿತರಿದ್ದರು. </p>.<p>ನಿರ್ಮಲ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಹಿಲರಿ, ನರ್ಸಿಂಗ್ ಸೂಪರಿಡೆಂಟ್ ಸಿಸ್ಟರ್ ವಿನ್ಸಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>