<p><strong>ದಾವಣಗೆರೆ: </strong>ಮಹಿಳೆಯರಿಗೆ ಫ್ಯಾಷನ್ ಅಂದರೆ ಆಸಕ್ತಿ ಜಾಸ್ತಿ. ಹಾಗಂತ ನಮ್ಮ ಶರಣ ಸಂಸ್ಕೃತಿಯನ್ನು, ಶರಣರ ವಚನಗಳನ್ನು ಮರೆಯಬಾರದು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p>ನಗರದ ಶಿವಯೋಗಾಶ್ರಮದಲ್ಲಿ ಜಯದೇವ ಶ್ರೀಗಳ 63ನೇ ಸ್ಮರಣೋತ್ಸವ ಅಂಗವಾಗಿ ನಡೆದ ಮಹಿಳೆಯರ ಸಮೂಹ ವಚನಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.</p>.<p>ವಚನಗಳನ್ನು ಸಾಮೂಹಿಕವಾಗಿ ಹಾಡುವ ತಂಡಗಳ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಹೆಜ್ಜೆನು. ವಚನಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.</p>.<p>ಕದಳಿ ವೇದಿಕೆ ಅಧ್ಯಕ್ಷೆ ಯಶಾ ದಿನೇಶ್, ತೀರ್ಪುಗಾರರಾದ ರೇವಣಸಿದ್ದಪ್ಪ, ದಮಯಂತಿ ಗೌಡರ್ ಇದ್ದರು.</p>.<p>ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಮರುಳಸಿದ್ದೇಶ್ವರ ತಂಡ ಪ್ರಥಮ, ಸ್ನೇಹಾ ತಂಡ ದ್ವಿತೀಯ ಹಾಗೂ ಸರಸ್ವತಿ ತಂಡವು ತೃತೀಯ ಬಹುಮಾನ ಪಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಮಹಿಳೆಯರಿಗೆ ಫ್ಯಾಷನ್ ಅಂದರೆ ಆಸಕ್ತಿ ಜಾಸ್ತಿ. ಹಾಗಂತ ನಮ್ಮ ಶರಣ ಸಂಸ್ಕೃತಿಯನ್ನು, ಶರಣರ ವಚನಗಳನ್ನು ಮರೆಯಬಾರದು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p>ನಗರದ ಶಿವಯೋಗಾಶ್ರಮದಲ್ಲಿ ಜಯದೇವ ಶ್ರೀಗಳ 63ನೇ ಸ್ಮರಣೋತ್ಸವ ಅಂಗವಾಗಿ ನಡೆದ ಮಹಿಳೆಯರ ಸಮೂಹ ವಚನಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.</p>.<p>ವಚನಗಳನ್ನು ಸಾಮೂಹಿಕವಾಗಿ ಹಾಡುವ ತಂಡಗಳ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಹೆಜ್ಜೆನು. ವಚನಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.</p>.<p>ಕದಳಿ ವೇದಿಕೆ ಅಧ್ಯಕ್ಷೆ ಯಶಾ ದಿನೇಶ್, ತೀರ್ಪುಗಾರರಾದ ರೇವಣಸಿದ್ದಪ್ಪ, ದಮಯಂತಿ ಗೌಡರ್ ಇದ್ದರು.</p>.<p>ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಮರುಳಸಿದ್ದೇಶ್ವರ ತಂಡ ಪ್ರಥಮ, ಸ್ನೇಹಾ ತಂಡ ದ್ವಿತೀಯ ಹಾಗೂ ಸರಸ್ವತಿ ತಂಡವು ತೃತೀಯ ಬಹುಮಾನ ಪಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>