ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಕಾಂಗ್ರೆಸ್ ಹೈಕಮಾಂಡ್ ಕಾಯಲು ನನಗೆ ಹೇಳಿದೆ. ಕಾಯುತ್ತೇನೆ. ಏನೇ ಮಾತನಾಡಿದರೂ ನನ್ನ ನಿರ್ಧಾರವೇ ಅಂತಿಮ. ಸದ್ಯದಲ್ಲಿಯೇ ನಿರ್ಧಾರ ಪ್ರಕಟಿಸುವೆ. ನಾನು ಈಗಲೇ ರಾಜೀನಾಮೆ ನೀಡಿದರೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಕೈ ಮೇಲಾಗುತ್ತದೆ’ ಎಂದು ಹೇಳಿದರು.