ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಎಚ್. ದೊಡ್ಡಗೌಡರ್, ‘ಕೆರಳುವಿಕೆ ಮತ್ತು ಸಮತೋಲನ’ ಬಗ್ಗೆ ಉಪನ್ಯಾಸ ನೀಡಿ, ‘ಮನುಷ್ಯ ದಿನ್ 24 ಗಂಟೆಗಳನ್ನು ಮೂರು ವಿಂಗಡನೆ ಮಾಡಿಕೊಳ್ಳಬೇಕು. 8 ಗಂಟೆ ವಿಶ್ರಾಂತಿ, 8 ಗಂಟೆ ಸರಿಯಾದ ದುಡಿಮೆ, 8 ಗಂಟೆ ತನ್ನವರಿಗಾಗಿ, ತನಗಾಗಿ ಮೀಸಲಿಟ್ಟರೆ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯ. ಸ್ವಯಂ ಕಾಳಜಿ, ಸಮಯ ಪಾಲನೆ, ಬೇರೆಯವರ ಮಾತಿಗೆ ತಲೆಬಿಸಿ ಮಾಡದೇ ಇರುವುದನ್ನು ವ್ಯಕ್ತಿತ್ವದಲ್ಲಿ ರೂಢಿಸಿಕೊಂಡರೆ ನಮ್ಮನ್ನು ಯಾರೂ ಕೆರಳಿಸಲು ಸಾಧ್ಯವಿಲ್ಲ. ಮನಸ್ಸು ಸಮತೋಲನದಲ್ಲಿದ್ದರೆ ಯಾರಿಂದಲೂ ಹಾಳು ಮಾಡಲು ಆಗದು’ ಎಂದು ವಿಶ್ಲೇಷಿಸಿದರು.