‘ದಾರ್ಶನಿಕರ ಬದುಕು ಘಟನೆಯಿಂದ ಕೂಡಿರುತ್ತದೆ. ದೇವರು ಧರ್ಮದ ಹೆಸರಿನಲ್ಲಿ ಕ್ರೌರ್ಯ, ಯುದ್ಧ ಜಗಳ ಕಾದಾಟ ಮುಂದುವರಿದಿದೆ. ಸಮ ಸಮಾಜ ನಿರ್ಮಾಣದ ಕನಸು, ಜಾತಿಗಿಂತ ನೀತಿ ಮುಖ್ಯ ಎಂಬುದನ್ನು ಬಸವಣ್ಣನವರ ವಚನದಲ್ಲಿ ಕಾಣಬಹುದು. ದೇವರಲ್ಲಿ ಭೇದ ಭಾವ ಇದೆ. ಆದರೆ ಬಸವಣ್ಣ ದೇವರನ್ನು ಮನಸ್ಸಿನಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ, ಸಮಾಜ ಸುಧಾರಣೆ ಮಾಡಿದ ಮಹಾನ್ ಚೇತನ.
ಆದ್ದರಿಂದ ಸರ್ಕಾರ ತಡವಾಗಿಯಾದರೂ ಎಚ್ಚೆತ್ತು ಸಾಂಸ್ಕೃತಿಕ ನಾಯಕನ್ನಾಗಿ ಕರೆದಿದೆ’ ಎಂದು ಹೇಳಿದರು.