ಜನೌಷಧಿ ಕೇಂದ್ರ ನಡೆಸಲು ಅನುಮತಿ ಪಡೆದುಕೊಂಡಿರುವ ಜಿ. ಸೌಮ್ಯ ಶಿವಪ್ರಸಾದ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ‘ರಕ್ತದೊತ್ತಡ, ಮಧುಮೇಹ, ಕಾರ್ಡಿಯಾ ಸೇರಿದಂತೆ ಎಲ್ಲ ರೋಗಗಳಿಗೂ ಗುಣಮಟ್ಟದ ಔಷಧಿಗಳು ಅತಿ ಕಡಿಮೆ ದರದಲ್ಲಿ ಲಭ್ಯವಾಗುತ್ತವೆ. ಬಡಜನರಿಗೆ ಕೈಗೆಟುಕುವ ಬೆಲೆಗೆ ಔಷಧಿಗಳನ್ನು ವಿತರಿಸುವುದೇ ನಮ್ಮ ಉದ್ದೇಶ’ ಎಂದರು.